ಅತ್ತಾವರ: ಸಭಾಭವನದ ಉದ್ಘಾಟನೆ
ಮಂಗಳೂರು, ಅ.15: ಅತ್ತಾವರದ ಶ್ರೀ ದೈವರಾಜ ಬಬ್ಬುಸ್ವಾಮಿ ದೈವಸ್ಥಾನದ ಬಳಿ ಮನಪಾ ಅನುದಾನದಿಂದ ನಿರ್ಮಿಸಲಾದ ನೂತನ ಸಭಾಭವನವನ್ನು ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಇತ್ತೀಚೆಗೆ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು ಬಬ್ಬುಸ್ವಾಮಿಯ ಕ್ಷೇತ್ರ ಬೆಳಗುವ ಜೊತೆಗೆ ಸಮುದಾಯದ ಎಲ್ಲಾ ಬಂಧುಗಳು ಬೆಳೆಯುವಂತಾಗಲಿ. ಕ್ಷೇತ್ರದಲ್ಲಿ ಬಾಕಿ ಇರುವ ಅಭಿವೃದ್ಧಿ ಕೆಲಸಕ್ಕಾಗಿ 2 ಲಕ್ಷ ರೂ.ಅನುದಾನವನ್ನು ಘೋಷಿಸಿದರು.
ಈ ಸಂದರ್ಭ ಮಾಜಿ ಕಾರ್ಪೊರೇಟರ್ ವಿನಯ್ರಾಜ್ ಸನ್ಮಾನಿಸಲಾಯಿತು. ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಜನಾರ್ದನ ಸುವರ್ಣ, ಮಾಜಿ ಕಾರ್ಪೊರೇಟರ್ ಪ್ರಕಾಶ್ ಬಿ. ಸಾಲ್ಯಾನ್, ಸೀತಾರಾಮ್, ಗುರಿಕಾರರಾದ ಚಂದ್ರಶೇಖರ್, ಕಿರಣ್ಕುಮಾರ್ ಕೋಡಿಯಾಲ್ಬೈಲ್, ಮಿಥುನ್ ಕುಮಾರ್ ಉರ್ವ, ಪ್ರೇಮ್ನಾಥ್ ಬಳ್ಳಾಲ್ಬಾಗ್, ರಂಜಿತ್, ಮಣಿಕಂಠ, ಪದ್ಮನಾಭ, ರವೀಂದ್ರ ಉಪಸ್ಥಿತರಿದ್ದರು.
ರಾಜೇಶ್ ಅತ್ತಾವರ ಸ್ವಾಗತಿಸಿದರು. ರಘುರಾಜ್ ಕದ್ರಿ ವಂದಿಸಿದರು. ರಘುವೀರ ಬಾಬುಗುಡ್ಡ ಕಾರ್ಯಕ್ರಮ ನಿರೂಪಿಸಿದರು.
Next Story