ಪೊಲೀಸರಿಗೆ ಮಾಹಿತಿ ನೀಡಿದ ಆರೋಪ: ಯುವಕನಿಗೆ ಹಲ್ಲೆ
ವಿಟ್ಲ, ಅ. 15: ಪೊಲೀಸರಿಗೆ ಮಾಹಿತಿ ನೀಡಿದ ಆರೋಪದ ಮೇರೆಗೆ ವ್ಯಕ್ತಿಯೋರ್ವನ ಮೇಲೆ ಹಲ್ಲೆ ಮಾಡಿದ ಘಟನೆ ಸಾಲೆತ್ತೂರು ಗ್ರಾಮದ ಮೆದು ಎಂಬಲ್ಲಿ ಮಂಗಳವಾರ ನಡೆದಿದೆ.
ಕೊಳ್ನಾಡು ಮಣ್ಣಗದ್ದೆ ಮನೆ ನಿವಾಸಿ ಅಬ್ದುಲ್ ಹಾರಿಸ್ (22) ಹಲ್ಲೆಗೊಳಗಾದ ವ್ಯಕ್ತಿ. ತಾಯಿಯೊಂದಿಗೆ ಕಾರಿನಲ್ಲಿ ತನ್ನ ಅಕ್ಕನ ಮನೆಗೆ ಹೋಗುತ್ತಿದ್ದಾಗ ಮೆದು ಎಂಬಲ್ಲಿ ಇನ್ನೊಂದು ಕಾರಿನಲ್ಲಿ ಬಂದ ಪರಿಚಯಿಸ್ಥರೊಬ್ಬರು ತನ್ನ ಕಾರು ತಡೆದು ಹಲ್ಲೆ ನಡೆಸಿದ್ದಲ್ಲದೆ, ಅವಾಚ್ಯ ಶಬ್ದಗಳಿಂದ ಬೈದು, ಜೀವ ಬೆದರಿಕೆ ಹಾಕಿರುವುದುದಾಗಿ ಹಾರಿಸ್ ಅವರು ಪೊಲೀಸ್ ದೂರಿನಲ್ಲಿ ತಿಳಿಸಿದ್ದಾರೆ.
ಈ ಸಂಬಂಧ ವಿಟ್ಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
Next Story