ಜಾಗ ಮಾರಾಟ ಮಾಡದೆ ವಂಚನೆ: ದೂರು
ಉಡುಪಿ, ಅ.16: ಮುಂಗಡ ಹಣ ಪಡೆದ ಜಾಗವನ್ನು ಮಾರಾಟ ಮಾಡದೆ ವಂಚಿಸಿರುವ ಬಗ್ಗೆ ಕಟಪಾಡಿಯ ಕೆ.ಮಹೇಶ್ ಶೆಣೈ ನೀಡಿದ ನ್ಯಾಯಾಲಯದ ಖಾಸಗಿ ದೂರಿನಂತೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಕ್ಕುಂಜೆಯ ಪ್ರಭಾ ಅಶೋಕ್ ಶೆಣೈ ಎಂಬವರ 3.04 ಎಕ್ರೆ ಸ್ಥಿರಾಸ್ಥಿಯನ್ನು ಖರೀದಿಯ ಸಲುವಾಗಿ ಮಹೇಶ್ ಶೆಣೈ ಮುಂಗಡವಾಗಿ 5,00,000ರೂ. ಹಣವನ್ನು 2016ರ ಜ.6ರಂದು ಬ್ಯಾಂಕಿನ ಪೇ ಆರ್ಡರ್ ಮೂಲಕ ನೀಡಿದ್ದು, ಆದರೆ ಅಶೋಕ್, ಕುಮಾರ್ ಶೆಣೈ, ಕಾತ್ಯಯಿನಿ ಗುಬ್ಬಿ ಕಿರಣ್ ಎಂಬವರು ಮಹೇಶ್ ಶೆಣೈಗೆ ಮೋಸ ಮಾಡುವ ಉದ್ದೇಶದಿಂದ ಸ್ಥಿರಾಸ್ಥಿಯನ್ನು ಈವರೆಗೆ ಮಾರಾಟ ಮಾಡದೆ ವಂಚಿಸಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.
Next Story