ಆವರ್ಸೆ ಗ್ರಾಪಂನಲ್ಲಿ ತ್ರೈಮಾಸಿಕ ಕೆಡಿಪಿ ಸಭೆ
ಉಡುಪಿ, ಅ.17: ಆವರ್ಸೆ ಗ್ರಾಪಂನ ದ್ವಿತೀಯ ಹಂತದ ತ್ರೈಮಾಸಿಕ ಕೆಡಿಪಿ ಸಭೆ ಗ್ರಾಪಂ ಅಧ್ಯಕ್ಷ ಹೆಚ್ ಪ್ರಮೋದ್ ಹೆಗ್ಡೆ ಅಧ್ಯಕ್ಷತೆಯಲ್ಲಿ, ಆವರ್ಸೆ ಗ್ರಾಪಂ ಸಭಾಂಗಣದಲ್ಲಿ ಮಂಗಳವಾರ ನಡೆಯಿತು.
ಸಭೆಯಲ್ಲಿ ಕೃಷಿ ಇಲಾಖೆಯ ಕೃಷಿ ಅಧಿಕಾರಿ ಚಂದ್ರಶೇಖರ ಶೆಟ್ಟಿ, ಗ್ರಂಥಾಲಯ ಇಲಾಖೆ ಮೇಲ್ವಿಚಾರಕಿ ಸನಾ, ಸಿಂ.ರೈ.ಸೇ.ಸ.ಸಂಘ ಆವರ್ಸೆ ಶಾಖಾಧಿಕಾರಿ ಶರತ್ ಶೆಟ್ಟಿ, ಶಿಕ್ಷಣ ಇಲಾಖೆ ಸಹಶಿಕ್ಷಕಿ ಶಾಮಿಲಿ, ಶಿಶು ಅಭಿವೃಧ್ಧಿ ಇಲಾಖೆಯಿಂದ ಅಂಗನವಾಡಿ ಮೇಲ್ವಿಚಾರಕಿ ಬಾಗೀರಥಿ ಆಚಾರ್, ಬ್ರಹ್ಮಾವರ ಶಿಶು ಅಭಿವೃಧ್ಧಿ ಯೋಜನೆ ತರಬೇತಿ ಮೇಲ್ವಿಚಾರಕಿ ಸಾಕು, ಆವರ್ಸೆ ಆ.ಹಾ.ಉ.ಸ.ಸಂಘ ಹಾಲು ಪರಿವೀಕ್ಷಕ ಸುಧಾಕರ ಮರಕಾಲ, ಹಿಲಿಯಾಣ ಗ್ರಾಮ ಲೆಕ್ಕಾಧಿಕಾರಿ ವಿಜಯಕುಮಾರ್, ಆವರ್ಸೆ ಗ್ರಾಮ ಲೆಕ್ಕಾಧಿಕಾರಿ ಮಂಜುನಾಥ ಹೆಚ್ ಆರ್, ಮೆಸ್ಕಾಂ ಮೇಲ್ವಿಚಾರಕ ಉಮೇಶ ಬಿ, ಆವರ್ಸೆ ಪ್ರಾ.ಆ.ಕೇಂದ್ರದ ಆರೋಗ್ಯ ಸಹಾಯಕಿ ಪ್ರತಿಮಾ, ಆವರ್ಸೆ ಪಶು ಚಿಕಿತ್ಸಾಲಯದ ಪರಿವೀಕ್ಷಕ ಬಾಲಕೃಷ್ಣ ಶೆಟ್ಟಿ ಉಪಸ್ಥಿತರಿದ್ದರು.
ಗ್ರಾಪಂ ಪಿಡಿಓ ಸ್ವಾಗತಿಸಿದರು.
Next Story