ಪ್ರತ್ಯೇಕ ಪ್ರಕರಣ: ಇಬ್ಬರ ಆತ್ಮಹತ್ಯೆ
ಬೈಂದೂರು, ಅ.18: ಮಾನಸಿಕ ಖಾಯಿಲೆಯಿಂದ ಬಳಲುತ್ತಿದ್ದ ಬಿಜೂರು ಕಳಸಮನೆಯ ಮುತ್ತು ಎಂಬವರ ಮಗ ವಸಂತ ಪೂಜಾರಿ ಎಂಬವರು ಅ.16ರಂದು ಸಂಜೆಯಿಂದ ಅ.18ರಂದು ಬೆಳಗಿನ ಮಧ್ಯಾವಧಿಯಲ್ಲಿ ಮನೆ ಸಮೀಪದ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶಂಕರನಾರಾಯಣ: ಮದ್ಯ ಸೇವನೆ ಚಟ ಹಾಗೂ ಅನಾರೋಗ್ಯದಿಂದ ಜೀವನದಲ್ಲಿ ಜಿಗುಪ್ಸೆಗೊಂಡ ಉಳ್ಳೂರು 74 ಗ್ರಾಮದ ಹೊಸಬಾಳು ಚಂದ್ರಶೇಖರ ಗಾಣಿಗ(45) ಎಂಬವರು ಅ.15ರಂದು ಮಧ್ಯಾಹ್ನ ವೇಳೆ ಮನೆಯ ಮಾಡಿನ ಜಂತಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story