ಟಿಪ್ಪರ್ ಮರಕ್ಕೆ ಢಿಕ್ಕಿ: ಇಬ್ಬರು ಮೃತ್ಯು
ಕಾರ್ಕಳ, ಅ.19: ಟಿಪ್ಪರೊಂದು ಮರಕ್ಕೆ ಢಿಕ್ಕಿ ಹೊಡೆದ ಪರಿಣಾಮ ಇಬ್ಬರು ಮೃತಪಟ್ಟು, ಚಾಲಕ ಗಾಯಗೊಂಡ ಘಟನೆ ಸಾಣೂರು ಗ್ರಾಮದ ಚಿಲಿಂಬಿ ಎಂಬಲ್ಲಿ ಅ.18ರಂದು ಸಂಜೆ 5ಗಂಟೆ ಸುಮಾರಿಗೆ ನಡೆದಿದೆ.
ಮೃತರನ್ನು ಮಂಗಳೂರು ಕೊಣಾಜೆಯ ರಮಾನಂದ(40) ಮತ್ತು ವಾಮಂಜೂರಿನ ಸುಭಾಶ್(36) ಎಂದು ಗುರುತಿಸಲಾಗಿದೆ. ಚಾಲಕ ಬಜ್ಪೆಯ ಅಕ್ಬರ್ ಗಾಯಗೊಂಡಿದ್ದಾರೆ. ಸಾಣೂರು ಕಡೆಯಿಂದ ಮೂಡಬಿದ್ರೆ ಕಡೆಗೆ ಹೋಗುತ್ತಿದ್ದ ಟಿಪ್ಪರ್, ರಸ್ತೆ ಬದಿಯ ಮರಕ್ಕೆ ಡಿಕ್ಕಿ ಹೊಡೆಯಿತೆನ್ನಲಾಗಿದೆ. ಇದರಿಂದ ಟಿಪ್ಪರ್ನಲ್ಲಿದ್ದ ರಮಾನಂದ ಮತ್ತು ಸುಭಾಷ್ ಗಂಭೀರವಾಗಿ ಗಾಯ ಗೊಂಡು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ಕರೆದುಕೊಂಡು ಹೋಗುವ ದಾರಿ ಮಧ್ಯೆ ಮೃತಪಟ್ಟರು.
ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story