ವಿಶ್ವಕರ್ಮ ಸೇವಾ ಸಂಘದ ವಾರ್ಷಿಕ ಮಹಾಸಭೆ
ಉಡುಪಿ, ಅ.20: ವಿಶ್ವಕರ್ಮ ಸೇವಾ ಸಂಘ ಚಿಟ್ಪಾಡಿ ಮಂಚಿ ಇದರ ವಾರ್ಷಿಕ ಮಹಾಸಭೆಯು ಸಂಘದ ಅಧ್ಯಕ್ಷ ಸುಧಾಕರ್ ಆಚಾರ್ಯ ಅಧ್ಯಕ್ಷತೆಯಲ್ಲಿ ರವಿವಾರ ಸಂಘ ನೂತನ ಕಟ್ಟಡದಲ್ಲಿ ನಡೆಯಿತು.
ಸಭೆಯನ್ನು ಬಾರ್ಕೂರು ಶ್ರೀಕಾಳಿಕಾಂಬ ದೇವಸ್ಥಾನದ ಮಾಜಿ ಆಡಳಿತ ಮೊಕ್ತೇಸರ ಕೆ.ಜಯರಾಮ್ ಆಚಾರ್ಯ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಎಸೆಸೆಲ್ಸಿ ಪರೀಕ್ಷೆಯಲ್ಲಿ ರಾಜ್ಯದಲ್ಲಿ 5ನೇ ರ್ಯಾಂಕ್ ಪಡೆದ ಅಂಕಿತ ಪಿ. ಆಚಾರ್ಯ ಹಾಗೂ ಯುಕ್ತ ಆಚಾರ್ಯ, ದೀಕ್ಷಾ ಆಚಾರ್ಯ ಅವರಿಗೆ ಪ್ರತಿಭಾ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು.
ಮುಖ್ಯ ಅತಿಥಿಗಳಾಗಿ ಸ್ವರ್ಣೊದ್ಯಮಿ ಪರ್ಕಳ ಗೋಪಾಲಕೃಷ್ಣ ಆಚಾರ್ಯ, ಸಂಘಧ ಗೌರವಾಧ್ಯಕ್ಷ ಶೇಖರ ಆಚಾರ್ಯ, ಉಪಾಧ್ಯಕ್ಷರಾದ ಜನಾರ್ದನ ಆಚಾರ್ಯ, ಸತೀಶ ಆಚಾರ್ಯ, ಮಹೇಶ ಆಚಾರ್ಯ, ಕಾಳಿಕಾಂಬಾ ಮಹಿಳಾ ಮಂಡಳಿಯ ಗೌರವಾಧ್ಯಕ್ಷೆ ಉಷಾ ಭಾಸ್ಕರ್, ಅಧ್ಯಕ್ಷೆ ಯಶೋಧ ಗಂಗಾಧರ್, ಪ್ರಧಾನ ಕಾರ್ಯದರ್ಶಿ ರಾಜೇಶ್ ಎಸ್.ಆಚಾರ್ಯ, ಕೋಶಾಧಿಕಾರಿ ಅಶೋಕ ಆಚಾರ್ಯ ಉಪಸ್ಥಿತರಿದ್ದರು. ಹರೀಶ್ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು.
Next Story