ಮಂಗಳೂರು ವಿವಿ ಸ್ನಾತಕೋತ್ತರ ವಿದ್ಯಾರ್ಥಿ ಪರಿಷತ್ ಉದ್ಘಾಟನೆ
ಕೊಣಾಜೆ: ವಿದ್ಯಾರ್ಥಿ ಜೀವನದಲ್ಲೇ ನಮ್ಮ ಗುರಿ, ಆಸಕ್ತಿ, ಆಲೋಚನೆಗಳು ಸ್ಪಷ್ಟವಾಗಿಟ್ಟುಕೊಂಡು ಪರಿಶ್ರಮದೊಂದಿಗೆ ಮುನ್ನಡೆದರೆ ಜೀವನದಲ್ಲಿ ನಾವು ಉತ್ತಮ ಸಾಧನೆ ಮಾಡಲು ಸಾಧ್ಯವಾಗುತ್ತದೆ ಎಂದು ಚಲನಚಿತ್ರ ನಟ ರೂಪೇಶ್ ಶೆಟ್ಟಿ ಎಂದು ಹೇಳಿದರು.
ಅವರು ಮಂಗಳೂರು ವಿಶ್ವವಿದ್ಯಾಲಯದ ೨೦೧೯-೨೦ನೇ ಸಾಲಿನ ಸ್ನಾತಕೋತ್ತರ ವಿದ್ಯಾರ್ಥಿ ಪರಿಷತ್ ನ ಉದ್ಘಾಟನಾ ಸಮಾರಂಭ ಹಾಗೂ ಪ್ರತಿಭಾ ಪ್ರದರ್ಶನವನ್ನು ಮಂಗಳವಾರ ಉದ್ಘಾಟಿಸಿ ಮಾತನಾಡಿದರು.
ಸಿನಿಮಾ ಕ್ಷೇತ್ರದಲ್ಲಿ ಯಾರೂ ಏಕಾಏಕಿ ಸಾಧನೆ ಮಾಡಲು ಸಾಧ್ಯವಿಲ್ಲ. ನಾನು ಹಲವು ಚಿತ್ರಗಳಲ್ಲಿ ಪಾತ್ರ ಮಾಡಿದ್ದೇನೆ. ಕೆಲವೊಂದು ಸಂದರ್ಭಗಳಲ್ಲಿ ಸೋತಿದ್ದೇನೆ. ಆದರೆ ನಾವು ಇಟ್ಟ ಹೆಜ್ಜೆ ಗಟ್ಟಿಯಾಗಿದ್ದರೆ, ಆತ್ಮವಿಶ್ವಾಸವಿದ್ದರೆ ಗೆಲುವು ಖಂಡಿತಾ ಸಾಧಿಸಬಹುದು. ಗಿರಿಗಿಟ್ ಸಿನಿಮಾ ನಮ್ಮಲ್ಲಿ ಮಾತ್ರವಲ್ಲ ಅಮೇರಿಕಾ, ದುಬಾಯಿಯಲ್ಲೂ ಯಶಸ್ವಿಯಾಗಿದ್ದು ನಿಮ್ಮೆಲ್ಲರ ಪ್ರೋತ್ಸಾಹ ವೇ ಕಾರಣ ಎಂದು ಹೇಳಿದರು.
ಕಾಲೇಜು ಜೀವನ ಮಹತ್ಬವಾದುದ್ದು. ಈ ಸಂದರ್ಭದಲ್ಲಿ ನಾವು ಪಡೆದುಕೊಳ್ಳುವ ಅನುಭವ, ಅಧ್ಯಾಪಕರ ಮಾರ್ಗದರ್ಶನ ಮುಂದೆ ನಮ್ಮ ಬದುಕಿನಲ್ಲಿ ಪ್ರಭಾವವನ್ನು ಬೀರುತ್ತದೆ. ಆದ್ದರಿಂದ ಶಿಕ್ಷಣ ನಮ್ಮ ಬದುಕಿನ ಅಡಿಪಾಯವನ್ನು ರೂಪಿಸುತ್ತದೆ ಎಂದು ಹೇಳಿದರು. ಮಂಗಳೂರು ವಿವಿ ಪರೀಕ್ಷಾಂಗ ಕುಲಸಚಿವ ಪ್ರೊ.ರವೀಂದ್ರಾಚಾರಿ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು. ಮಂಗಳೂರು ವಿವಿ ವಿದ್ಯಾರ್ಥಿ ಕ್ಷೇಮಪಾಲನ ವಿಭಾಗದ ನಿರ್ದೇಶಕರಾದ ಪ್ರೊ.ಉದಯ ಬಾರ್ಕೂರು ಅವರು ನೂತನ ವಿದ್ಯಾರ್ಥಿ ಪದಾಧಿಕಾರಿಗಳಿಗೆ ಪ್ರಮಾಣವಚನ ಬೋಧಿಸಿದರು.
ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಸುಮನ್ ಕುಮಾರ್ , ಉಪಾಧ್ಯಕ್ಷ ರಾದ ಹವಿನ್ ಕುಮಾರ್, ಕಾರ್ಯದರ್ಶಿ ಭರತ್ ರಾಜ್, ಸಹ ಕಾರ್ಯದರ್ಶಿ ದೀಕ್ಷಿತಾ, ಸಾಂಸ್ಕೃತಿಕ ಕಾರ್ಯದರ್ಶಿ ಚರಿತ್ ಕುಮಾರ್, ಜೀವನ್ ಮೊದಲಾದವರು ಉಪಸ್ಥಿತರಿದ್ದರು.