ಉಡುಪಿ: ಗೈಡ್ಸ್ಗಳಿಗೆ ರಾಜ್ಯ ಪುರಸ್ಕಾರ ಪರೀಕ್ಷಾ ಶಿಬಿರ
ಉಡುಪಿ, ಅ.23:ವಿಭಾಗ ಮಟ್ಟದ ಗೈಡ್ಸ್ಗಳಿಗೆ (ಉಡುಪಿ,ಕೊಡಗು, ದಕ್ಷಿಣ ಕನ್ನಡ) ಅಲೆವೂರು ಪ್ರಗತಿ ನಗರದಲ್ಲಿರುವ ಡಾ.ವಿ.ಎಸ್.ಆಚಾರ್ಯ ಸ್ಕೌಟ್ಸ್-ಗೈಡ್ಸ್ ಜಿಲ್ಲಾ ತರಬೇತಿ ಕೇಂದ್ರದಲ್ಲಿ ಇತ್ತೀಚೆಗೆ ರಾಜ್ಯ ಪುರಸ್ಕಾರ ಪರೀಕ್ಷಾ ಶಿಬಿರ ನಡೆಯಿತು.
ಶಿಬಿರದಲ್ಲಿ ಒಟ್ಟು 275 ಮಂದಿ ಗೈಡ್ಸ್ಗಳು ಭಾಗವಹಿಸಿದ್ದರು. ಶಿಬಿರದ ಸಮಾರೋಪ ಸಮಾರಂದ ಅಧ್ಯಕ್ಷತೆಯನ್ನು ಜಿಲ್ಲಾ ಗೈಡ್ಸ್ ಅಯುಕ್ತೆ ಜ್ಯೋತಿ ಜೆ. ಪೈ ವಹಿಸಿದ್ದರು. ಉಡುಪಿ ಶಾಸಕ ರಘುಪತಿ ಟ್ ಭಾಗವಹಿಸಿ, ತರಬೇತಿ ಅಭಿವೃದ್ದಿಯ ಬಗ್ಗೆ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ಜಿಲ್ಲಾ ಸಹ ಕಾರ್ಯದರ್ಶಿ ಡಾ.ಜಯರಾಮ ಶೆಟ್ಟಿಗಾರ್, ಸ್ಕೌಟ್ಸ್-ಗೈಡ್ಸ್ನ ಮಹತ್ವ ತಿಳಿಸಿದರು. ಜಿಲ್ಲಾ ಸಂಘಟಕಿ ಸುಮನ್ ಶೇಖರ್ ಸ್ವಾಗತಿಸಿದರು. ಶಿಬಿರದ ನಾಯಕಿ ಕಮಲ ಶಿಬಿರದ ವರದಿಯನ್ನು ಮಂಡಿಸಿದರು. ತರಬೇತಿ ಆಯುಕ್ತೆ ಸಾವಿತ್ರಿ ವಂದಿಸಿದರು.
ಕಾರ್ಯಕ್ರಮದಲ್ಲಿ ತರಬೇತಿ ಆಯುಕ್ತ ಬಿ.ಆನಂದ ಆಡಿಗ, ಸ್ಥಾನೀಯ ಆಯು್ತ ಕೊಗ್ಗ ಗಾಣಿಗ ಉಪಸ್ಥಿತರಿದ್ದರು.
Next Story