ಭಟ್ಕಳ: ಅಫ್ಫಾನ್ ಕೊಲೆ ಪ್ರಕರಣ; ಮತ್ತೋರ್ವ ಸೆರೆ
ಭಟ್ಕಳ: ಕಳೆದ ಶನಿವಾರ ಲಾಡ್ಜೊಂದರಲ್ಲಿ ಮಹಮ್ಮದ್ ಅಫ್ಫಾನ್ ಜಬಾಲಿ ಎಂಬ ಯುವಕನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೋರ್ವ ಆರೋಪಿಯನ್ನು ಬಂಧಿಸಲಾಗಿದ್ದು, ಬಂಧಿತನನ್ನು ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ನಿವಾಸಿ ಸಿರಾಜ್ (32) ಎಂದು ಗುರುತಿಸಲಾಗಿದೆ. ಬಂಧಿತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಈಗಾಗಲೇ ಕೊಲೆಯ ಆರೋಪಿ ಇಕ್ಬಾಲ್ ಎಂಬಾತನನ್ನು ಬಂಧಿಸಿದ್ದು ಸಿರಾಜ್ ಬಂಧನದಿಂದ ಇಬ್ಬರನ್ನು ಬಂಧಿಸಿದಂತಾಗಿದೆ.
ಸತತ ವಿಚಾರಣೆಯಲ್ಲಿ ತೊಡಗಿದ್ದ ಪೊಲೀಸರ ತಂಡ ಇನ್ನುಳಿದವರಿಗಾಗಿ ಶೋಧ ಕಾರ್ಯ ನಡೆಸುತ್ತಿದ್ದು ಶೀಘ್ರದಲ್ಲಿಯೇ ಬಂಧಿಸುವ ಭರವಸೆಯನ್ನು ಹೊಂದಿದೆ. ಈಗಾಗಲೇ ಎರಡು ತಂಡಗಳನ್ನು ರಚಿಸಲಾಗಿದ್ದು ಕೊಲೆಗಾರರ ಚಲನವಲನಗಳನ್ನು ಅನುಸರಿಸಿ ಬಂಧನಕ್ಕೆ ಬಲೆ ಬೀಸಲು ಯತ್ನಿಸಲಾಗುತ್ತಿದೆ. ಕೊಲೆಯಲ್ಲಿ ಭಾಗಿಯಾಗಿರುವ ಇತರರು ಮಂಗಳೂರಿನವರು ಎನ್ನುವ ಮಾಹಿತಿ ಇರುವುದರಿಂದ ಒಂದು ತಂಡ ಮಂಗಳೂರು ಕಡೆಗೆ ಹಾಗೂ ಇನ್ನೊಂದು ತಂಡ ಗೋವಾದ ಕಡೆಗೆ ಹೋಗಿರುವ ಕುರಿತು ಮಾಹಿತಿ ಲಭ್ಯವಾಗಿದೆ.
Next Story