ಮನಪಾ ಚುನಾವಣೆ: ಎಸ್ಡಿಪಿಐ ಪಕ್ಷದ ಆರು ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ
ಮಂಗಳೂರು, ಅ.30: ಮಂಗಳೂರು ಮಹಾನಗರ ಪಾಲಿಕೆ ಚುನಾವಣೆಗೆ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್ಡಿಪಿಐ)ದಿಂದ ಆರು ಮಂದಿ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ.
ಕೃಷ್ಣಾಪುರ ವಾರ್ಡಿನಿಂದ ಶಂಶಾದ್ ಅಬೂಬಕರ್, ಪಂಜಿನಮೊಗರು ವಾರ್ಡಿನಿಂದ ಹನೀಫ್ ಕಾವೂರು, ಕಣ್ಣೂರು ವಾರ್ಡಿನಿಂದ ಮಿಸ್ರಿಯಾ ಹನೀಫ್, ಬಜಾಲ್ ವಾರ್ಡಿನಿಂದ ಕಬೀರ್ ಬಜಾಲ್, ಕುದ್ರೋಳಿ ವಾರ್ಡಿನಿಂದ ಮುಝೈರ್ ಕುದ್ರೋಳಿ, ಬೆಂಗರೆ ವಾರ್ಡಿನಿಂದ ಮುನೀಬ್ ಬೆಂಗರೆ ನಾಮಪತ್ರ ಸಲ್ಲಿಸಿದ್ದಾರೆ ಎಂದು ಪಕ್ಷದ ರಾಜ್ಯ ಸಮಿತಿ ಸದಸ್ಯ ಜಲೀಲ್ ಕೃಷ್ಣಾಪುರ ತಿಳಿಸಿದ್ದಾರೆ.
ನಾಮಪತ್ರ ಸಲ್ಲಿಕೆ ಸಂದರ್ಭ ರಾಜ್ಯ ಉಪಾದ್ಯಕ್ಷ ಹಾಗೂ ನ್ಯಾಯವಾದಿ ಮಜೀದ್ ಖಾನ್, ಕಾರ್ಯದರ್ಶಿ ಅಕ್ರಮ್ ಹಸನ್, ಜಿಲ್ಲಾಧ್ಯಕ್ಷ ಅಥಾವುಲ್ಲಾ ಜೋಕಟ್ಟೆ, ಜಿಲ್ಲಾ ಮುಖಂಡರಾದ ಆನಂದ ಮಿತ್ತಬೈಲ್, ಆಂತೋನಿ ಪಿ.ಡಿ., ಐ.ಎಂ.ಆರ್. ಇಕ್ಬಾಲ್, ಸಾಹುಲ್ ಎಸ್.ಎಚ್. ಇಕ್ಬಾಲ್ ಬೆಳ್ಳಾರೆ, ಅಶ್ರಫ್ ಮಂಚಿ, ಸುಹೇಲ್ ಖಾನ್, ನಸ್ರಿಯಾ ಬೆಳ್ಳಾರೆ ಉಪಸ್ಥಿತರಿದ್ದರು.