ತೊಕ್ಕೊಟ್ಟು: ರೈಲು ಢಿಕ್ಕಿಯಾಗಿ ಓರ್ವ ಮೃತ್ಯು
ಸಾಂದರ್ಭಿಕ ಚಿತ್ರ
ಉಳ್ಳಾಲ: ರೈಲ್ವೆ ಹಳಿ ದಾಟುತ್ತಿದ್ದ ವ್ಯಕ್ತಿಗೆ ರೈಲು ಢಿಕ್ಕಿ ಹೊಡೆದ ಪರಿಣಾಮ ಅವರು ಸ್ಥಳದಲ್ಲೇ ಮೃತಪಟ್ಟ ಘಟನೆ ಉಳ್ಳಾಲ ಠಾಣಾ ವ್ಯಾಪ್ತಿಯ ತೊಕ್ಕೊಟ್ಟು ಒಳಪೇಟೆಯಲ್ಲಿ ನಡೆದಿದೆ.
ಮೃತ ವ್ಯಕ್ತಿಯನ್ನು ಚೆಂಬುಗುಡ್ಡೆ ನಿವಾಸಿ ಮಹಮ್ಮದ್ ಬಶೀರ್(40)ಎಂದು ಗುರುತಿಸಲಾಗಿದೆ.
ಪೈಟಿಂಗ್ ವೃತ್ತಿ ಮಾಡುವ ಬಶೀರ್ ಅವರು ಶುಕ್ರವಾರ ಮಸೀದಿಗೆ ಹೋಗಲೆಂದು ಬರುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಮೃತ ಬಶೀರ್ ಅವರ ಮೊಬೈಲ್ ದೊರೆತಿದೆ. ಸ್ಥಳೀಯರಿಗೆ ಪರಿಚಯ ಇದ್ದ ಕಾರಣ ಗುರುತು ಪತ್ತೆಯಾಗಿದೆ. ಈ ಬಗೆ ರೈಲ್ವೇ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
Next Story