ವಾಲಿಬಾಲ್: 19ನೇ ಬಾರಿ ಪ್ರಶಸ್ತಿ ಗೆದ್ದ ತುಂಬೆ ಕಾಲೇಜು
ಬಂಟ್ವಾಳ, ನ. 1: ಪೆರ್ನೆ ಶ್ರೀ ರಾಮಚಂದ್ರ ಪ.ಪೂ. ಕಾಲೇಜಿನಲ್ಲಿ ನಡೆದ ಬಂಟ್ವಾಳ ತಾಲೂಕು ಮಟ್ಟದ ಪ.ಪೂ. ಕಾಲೇಜುಗಳ ಬಾಲಕರ ವಾಲಿಬಾಲ್ ಪಂದ್ಯಾಟದಲ್ಲಿ ತುಂಬೆ ಪದವಿ ಪೂರ್ವ ಕಾಲೇಜಿನ ಬಾಲಕರ ತಂಡವು 19ನೇ ಬಾರಿ ಪ್ರಶಸ್ತಿ ಮುಡಿಗೇರಿಸಿಕೊಂಡಿದೆ.
ದೈಹಿಕ ಶಿಕ್ಷಣ ನಿರ್ದೇಶಕ ಸಾಯಿರಾಮ್ ನಾಯಕ್, ಪ್ರಾಂಶುಪಾಲ ಕೆ.ಎನ್. ಗಂಗಾಧರ ಆಳ್ವ, ಉಪನ್ಯಾಸ ವಿ.ಎಸ್. ಭಟ್, ದೈಹಿಕ ಶಿಕ್ಷಕ ಜಗದೀಶ ರೈ ಬಿ, ವಿದ್ಯಾರ್ಥಿಗಳಾದ ಮುಹಮ್ಮದ್ ಅದುಲ್ಶಾ, ಮುಝಮ್ಮಿಲ್, ಜುನೈದ್ ಫರಾನ್, ನಿಶಾನ್, ಶರಾಫತ್ ಅಲಿ, ಮುಹಮ್ಮದ್ ಹುಸೈನ್ ಸಾಹೆಬ್, ದೀಕ್ಷಿತ್, ಇಸ್ಮಾಯಿಲ್ ಸವಾದ್, ಇಸ್ಮಾಯಿಲ್ ಅಫ್ತಾಬ್, ಸಫ್ವಾನ್, ಮುಹಮ್ಮದ್ ರಾಬಿ, ಕೌಶಿಲ್, ಅಬ್ದುಲ್ ರಹಿಮಾನ್ ಮುಫೀಝ್ ಚಿತ್ರದಲ್ಲಿದ್ದಾರೆ.
Next Story