ನೀರುಪಾಲಾದ ಯುವಕ ಮೃತದೇಹ ಪತ್ತೆ
ಹೆಬ್ರಿ, ನ.1: ಚಾರಾ ಗ್ರಾಮದ ಕಲ್ಲಿಲ್ಲು ಡ್ಯಾಂ ಹೊಳೆಯಲ್ಲಿ ಮುಳುಗಿ ನಾಪತ್ತೆಯಾದ ಯುವಕನ ಮೃತದೇಹವು ಮೂರು ದಿನಗಳ ಬಳಿಕ ಇಂದು ಪತ್ತೆಯಾಗಿದೆ.
ಮೃತರನ್ನು ಸ್ಥಳೀಯ ನಿವಾಸಿ ಸಂತೋಷ ಶೆಟ್ಟಿ(21) ಎಂದು ಗುರುತಿಸ ಲಾಗಿದೆ.
ಇವರು ಅ.29ರಂದು ಹೊಳೆಯಲ್ಲಿ ಸ್ನಾನ ಮಾಡುವಾಗ ಆಕಸ್ಮಿಕ ವಾಗಿ ನೀರಿನ ಸೆಳೆತಕ್ಕೆ ಕೊಚ್ಚಿಕೊಂಡು ಹೋಗಿ ನಾಪತ್ತೆಯಾಗಿದ್ದರು. ನ.1ರಂದು ಬೆಳಗ್ಗೆ 11.45ರ ಸುಮಾರಿಗೆ ಸಂತೋಷ್ ಶೆಟ್ಟಿ ಮೃತದೇಹವು ಘಟನಾ ಸ್ಥಳ ದಿಂದ ಸುಮಾರು 100 ಮೀಟರ್ ದೂರದ ಹೊಳೆಯಲ್ಲಿ ಪತ್ತೆಯಾಗಿದೆ.
ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story