ಸ್ಮೈಲ್ ಫೌಂಡೇಶನ್ ಕುಳಾಯಿ ವತಿಯಿಂದ ರಕ್ತದಾನ ಶಿಬಿರ
ಮಂಗಳೂರು, ನ.4: ಸ್ಮೈಲ್ ಫೌಂಡೇಶನ್ ಕುಳಾಯಿ ಹಾಗೂ ಬ್ಲಡ್ ಡೋನರ್ಸ್ ಮಂಗಳೂರು (ರಿ) ಇದರ ಜಂಟಿ ಸಹಭಾಗಿತ್ವದಲ್ಲಿ ಫಾದರ್ ಮುಲ್ಲರ್ ಬ್ಲಡ್ ಬ್ಯಾಂಕ್ ಕಂಕನಾಡಿ, ಮಂಗಳೂರು ಇದರ ಸಹಕಾರದೊಂದಿಗೆ ರಕ್ತದಾನ ಶಿಬಿರವು ಶ್ರೀ ವೆಂಕಟ್ರಮನ ಹಿರಿಯ ಪ್ರಾಥಮಿಕ ಶಾಲೆ ಕುಳಾಯಿ ಇದರ ಸಭಾಂಗಣದಲ್ಲಿ ಜರುಗಿತು.
ಕಳೆದ ಎರಡು ವರ್ಷಗಳಿಂದ ಸಾಮಾಜಿಕ ರಂಗದಲ್ಲಿ ಸೇವೆ ನೀಡುತ್ತಿರುವ ಸ್ಮೈಲ್ ಫೌಂಡೇಶನ್ ಕುಳಾಯಿ ತನ್ನ ದ್ವಿತೀಯ ವಾರ್ಷಿಕೋತ್ಸವವನ್ನು ರಕ್ತದಾನ ಶಿಬಿರದ ಮೂಲಕ ಆಚರಿಸಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಂಗಳೂರು ಮಹಾನಗರ ಪಾಲಿಕೆ ಮಾಜಿ ಮೇಯರ್ ಗಣೇಶ್ ಹೊಸಬೆಟ್ಟು, ಭಾರತಿ ಎಜುಕೇಶನ್ ಟ್ರಸ್ಟ್ ಮ್ಯಾನೆಜಿಂಗ್ ಡೈರೆಕ್ಟರ್ ಆದರ್ಶ್ ಶೆಟ್ಟಿ, ಬದ್ರಿಯಾ ಜುಮಾ ಮಸೀದಿ ಕುಳಾಯಿ ಅಧ್ಯಕ್ಷ ಮುಹಮ್ಮದ್ ರಫೀಕ್, ಸ್ಟೈನಿ ಅಟ್ ಮೈಡ ಕಾರ್ಯದರ್ಶಿ ಫಾತಿಮ ಮಂದಿರ್ ಕುಳಾಯಿ, ಮಾಜಿ ಸೈನಿಕರಾದ ಭಾಸ್ಕರ್ ರೈ ಹಾಗೂ ಪ್ರವೀಣ್ ಶೆಟ್ಟಿ, ಬ್ಲಡ್ ಡೋನರ್ಸ್ ಮಂಗಳೂರು (ರಿ) ಅಧ್ಯಕ್ಷ ಸಿದ್ದೀಕ್ ಮಂಜೇಶ್ವರ, ಸ್ಥಳೀಯ ಸಮಾಜ ಸೇವಕರಾದ ಜ್ಯೂಸ್ ಮ್ಯಾಜಿಕ್ ದೇರಳಕಟ್ಟೆಯ ಮಾಲಕ ಸಾಜಿದ್ ಕುಳಾಯಿ, ಕುಳಾಯಿ ಅಟೋ ಚಾಲಕ ಮತ್ತು ಮಾಲಕರ ಸಂಘದ ಅಧ್ಯಕ್ಷ ದಿನೇಶ್ ಕುಲಾಲ್, ಸ್ಮೈಲ್ ಫೌಂಡೇಶನ್ ಕುಳಾಯಿ ಸ್ಥಾಪಕ ಮುಹಮ್ಮದ್ ಶಿಪ್ರಾನ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಶಿಬಿರದಲ್ಲಿ 50ಕ್ಕೂ ಹೆಚ್ಚು ಮಂದಿ ರಕ್ತದಾನ ಮಾಡಿದರು,
ಸ್ಮೈಲ್ ಫೌಂಡೇಶನ್ ಕುಳಾಯಿ ಇದರ ಅಧ್ಯಕ್ಷ ಅಫ್ತಾಬ್ ಕುಳಾಯಿ ಅಧ್ಯಕ್ಷತೆ ವಹಿಸಿದ್ದರು. ಕಾರ್ಯ ನಿರ್ವಾಹಕ ಸಲ್ಮಾನ್ ಕುಳಾಯಿ ಅವರು ಸ್ವಾಗತಿಸಿ, ವಂದಿಸಿದರು.