ನ.12: ಪೊಳಲಿ ಶಾಸ್ತ್ರಿ ಪ್ರಶಸ್ತಿ ಪ್ರದಾನ
ಮಂಗಳೂರು, ನ.7: ಯಕ್ಷಗಾನ ವಾಚಸ್ಪತಿ ದಿ. ಪೊಳಲಿ ಶಂಕರ ನಾರಾಯಣ ಶಾಸ್ತ್ರಿಯ ಹೆಸರಲ್ಲಿ ನೀಡಲಾಗುವ ‘ಪೊಳಲಿ ಶಾಸ್ತ್ರಿ ಪ್ರಶಸ್ತಿ’ ಪ್ರದಾನವು ನ.12ರಂದು ಸಂಜೆ 4ಕ್ಕೆ ಕುಳಾಯಿಯ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ನಡೆಯಲಿದೆ.
2018-19ರ ಪ್ರಶಸ್ತಿಯನ್ನು ಅರ್ಥದಾರಿ, ಪ್ರವಚನಕಾರ ಸೇರಾಜೆ ಸೀತಾರಾಮ ಭಟ್ ಹಾಗೂ ಅರ್ಥದಾರಿ ಪ್ರವಚನಕಾರ ಸರ್ಪಂಗಳ ಈಶ್ವರಭಟ್ ರಿಗೆ ಪ್ರದಾನ ಮಾಡಲಾಗುವುದು ಎಂದು ಪ್ರಕಟನೆ ತಿಳಿಸಿದೆ.
Next Story