ಉಪ್ಪಿನಂಗಡಿಯಲ್ಲಿ ಮೀಲಾದ್ ರ್ಯಾಲಿ
ಉಪ್ಪಿನಂಗಡಿ : ಮಾಲಿಕುದ್ದಿನಾರ್ ಕೇಂದ್ರ ಜುಮಾ ಮಸೀದಿ ತನ್ವೀರುಲ್ ಇಸ್ಲಾಂ ಮದರಸ ಮತ್ತು ಜಮಾಅತ್ ವತಿಯಿಂದ ಮೀಲಾದ್ ರ್ಯಾಳಿ ಜರಗಿತು.
ಜಮಾಅತ್ ಅಧ್ಯಕ್ಷ ಹಾಜಿ ಮುಸ್ತಫಾ ಕೆಂಪಿ ಧ್ವಜರೋಹಣ ನೆರವೇರಿಸಿದರು. ಸ್ಥಳೀಯ ಮುದರ್ರಿಸ್ ನಝೀರ್ ಅಝ್ಹರಿ ಪ್ರಾರ್ಥನೆ ನಿರ್ವಹಿಸಿದರು. ನಂತರ ವಿವಿಧ ಮೊಹಲ್ಲಗಳಿಂದ ಬಂದಂತಹ ಧಫ್ ಸ್ಕೌಟ್ ತಂಡಗಳೊಂದಿಗೆ ಶಾಂತಿಯುತವಾದ ಮೀಲಾದ್ ರ್ಯಾಲಿ ಜರಗಿತು.
ಮಠ ಜುಮಾ ಮಸೀದಿ ಖತೀಬ್ ಅಬೂಬಕರ್ ನಯೀಮಿ ಭಾಷಣ ಮಾಡಿದರು. ಉಪ್ಪಿನಂಗಡಿ ಜಮಾಅತ್ ಕಾರ್ಯದರ್ಶ ಶುಕೂರ್ ಹಾಜಿ, ಉಪಾಧ್ಯಕ್ಷ ಹಾರೂನ್ ಹಾಜಿ ಅಗ್ನಾಡಿ, ಅಶ್ರಫ್ ಹಾಜಿ ಸಿಟಿ, ಎಚ್ ಯೂಸುಫ್ ಹಾಜಿ, ಮುಹಮ್ಮದ್ ಮುಸ್ತಫ, ಯೂಸುಫ್ ಪೆದಮಲೆ, ಮುಹಮ್ಮದ್ ಕೂಟೇಲು, ನಝೀರ್ ಮಠ, ರವೂಫ್ ಹಾಜಿ, ಶಬೀರ್ ಕೆಂಪಿ, ಸಿದ್ದೀಖ್ ಕೆಂಪಿ, ಯುಟಿ ತೌಸೀಫ್, ಹಮೀದ್ ಕರಾವಳಿ, ಇಸ್ಮಾಯಿಲ್ ತಂಙಳ್, ಅಝೀಝ್ ಫೈಝಿ, ಅಶ್ರಫ್ ಹನೀಫಿ, ಮುಹಮ್ಮದ್ ಅಲೀ ಮುಸ್ಲಿಯಾರ್, ಬಿ ಕೆ ಹಮೀದ್, ಯುಕೆ ಅಯ್ಯೂಬ್ ಮುಂತಾದವರು ಉಪಸ್ಥಿತರಿದ್ದರು. ಹಸನ್ ಇಂದಾದಿ ದುಅ ನಡೆಸಿದರು. ಮದರಸ ಮುಖ್ಯ ಅಧ್ಯಾಪಕರಾದ ಇಬ್ರಾಹಿಂ ಬಾತಿಷಾ ಅಝ್ಹರಿ ಸ್ವಾಗತಿಸಿದರು. ಅಬ್ದುರ್ರಶೀದ್ ಮುಸ್ಲಿಯಾರ್ ವಂದಿಸಿದರು.