ಕಲ್ಲಡ್ಕ : ಮೀಲಾದುನ್ನಬಿ ಪ್ರಯುಕ್ತ ರಕ್ತದಾನ ಶಿಬಿರ
ಬಂಟ್ವಾಳ : ಪ್ರವಾದಿ ಮುಹಮ್ಮದ್ ಮುಸ್ತಫಾ (ಸ ಅ) ಅವರ ಜನ್ಮ ದಿನಾಚರಣೆಯ ಪ್ರಯುಕ್ತ ಟಿಕ್ಕಾ ಪಾಯಿಂಟ್ ಆರ್ಟ್ಸ್ ಆ್ಯಂಡ್ ಸ್ಪೋರ್ಟ್ಸ್ ಕ್ಲಬ್ ಕಲ್ಲಡ್ಕ ಹಾಗೂ ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ ಜಂಟಿ ಆಶ್ರಯದಲ್ಲಿ ತೇಜಸ್ವಿನಿ ಆಸ್ಪತ್ರೆ ಮಂಗಳೂರು ಇದರ ಸಹಭಾಗಿತ್ವದಲ್ಲಿ ಕಲ್ಲಡ್ಕದ ಬಾಳಿಯೂರು ಸಿಟಿ ವಾಣಿಜ್ಯ ಸಂಕೀರ್ಣದ ಮರ್ಹೂಮ್ ಅಝೀಝ್ ಬಲ್ಲೆಕೋಡಿ ವೇದಿಕೆಯಲ್ಲಿ ರಕ್ತದಾನ ಶಿಬಿರ ನಡೆಯಿತು.
ಪಿ.ಎಫ್.ಐ ಕಲ್ಲಡ್ಕ ವಲಯ ಅಧ್ಯಕ್ಷ ಸಿದ್ದೀಕ್ ಹಾಜಿ ಪನಾಮ ಅಧ್ಯಕ್ಷತೆ ವಹಿಸಿದ್ದ ಕಾರ್ಯಕ್ರಮವನ್ನು ಎ.ಪಿ.ಎಂ.ಸಿ ಬಂಟ್ವಾಳ ಇದರ ಅಧ್ಯಕ್ಷ ಪದ್ಮನಾಭ ರೈ ಉದ್ಘಾಟಿಸಿದರು.
ವೇದಿಕೆಯಲ್ಲಿ ರಾಜೇಂದ್ರ ಎನ್.ಹೊಳ್ಳ, ರಾಜ ಮೋನಾಕ, ಜವಾಝ್ ಜಿ.ಕೆ, ಸಿರಾಜುದ್ದೀನ್ ಪರ್ಲಡ್ಕ, ಹೈದರ್ ಕಲ್ಲಡ್ಕ, ಸಫ್ವಾನ್ ಸಾಬಿತ್ ಅಜ್ಜಿಕಲ್, ಸಿದ್ದೀಕ್ ಜೆ.ಎಸ್, ಹಾರಿಸ್ ಅಮರ್, ಅಫ್ರಿದ್ ಮಿಲಾದ್, ಮುನಾಝ್ ಮುನ್ನ, ನಝೀರ್ ಬಲ್ಲೆಕೋಡಿ, ಫಾರೂಕ್ ಜಿ.ಎ, ಫಾರೂಕ್ ಕಲ್ಲಡ್ಕ, ರಫೀಕ್ ಎಸ್.ಆರ್, ಸಜ್ಜಾದ್ ಕಲ್ಲಡ್ಕ ಹಾಗೂ ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ ಇದರ ನಿರ್ವಾಹಕರು ಉಪಸ್ಥಿತರಿದ್ದರು.
ಯಶಸ್ವಿಯಾಗಿ ನಡೆದ ರಕ್ತದಾನ ಶಿಬಿರದಲ್ಲಿ ಒಟ್ಟು 100 ಮಂದಿ ಪಾಲ್ಗೊಂಡು ರಕ್ತದಾನ ಮಾಡಿದರು. ದಾನಿಗಳಿಂದ ರಕ್ತ ಸಂಗ್ರಹಿಸುವಲ್ಲಿ ತೇಜಸ್ವಿನಿ ಆಸ್ಪತ್ರೆ ಮಂಗಳೂರು ಇದರ ವೈದ್ಯಾಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು ಸಹಕರಿಸಿದರು.
ರಕ್ತದಾನ ಶಿಬಿರಕ್ಕೆ ಕಲ್ಲಡ್ಕದ ಹೋಟೇಲ್ ಲಕ್ಷ್ಮಿ ಗಣೇಶ್ ಕಲ್ಲಡ್ಕ, ಹೋಟೇಲ್ ದುರ್ಗಾ ಪರಮೇಶ್ವರಿ ಕಲ್ಲಡ್ಕ ಹಾಗೂ ಫ್ಯಾಷನ್ ಪ್ರೈಡ್ ಕಲ್ಲಡ್ಕಇದರ ಮಾಲಕರು ಸಂಪೂರ್ಣ ಸಹಕಾರವನ್ನು ನೀಡಿದರು.
ಅಬ್ದುಲ್ ಲತೀಫ್ ನೇರಳಕಟ್ಟೆ ಸ್ವಾಗತಿಸಿದರು.ಅಶ್ರಫ್ ಅರಬಿ ಕಲ್ಲಡ್ಕ ಕಾರ್ಯಕ್ರಮ ನಿರೂಪಣೆಗೈದರು.