ಬಂಟ್ವಾಳ: ವಿದ್ಯಾರ್ಥಿಗಳ ಭವಿಷ್ಯ ಮಾರ್ಗದರ್ಶನ ಕಾರ್ಯಕ್ರಮ
ಬಂಟ್ವಾಳ, ನ. 12: ಬಿ.ಸಿ.ರೋಡಿನ ಬೆಸ್ಟ್ ಆಂಗ್ಲ ಮಾಧ್ಯಮ ಶಾಲೆಯ ಶಿಕ್ಷಕ-ರಕ್ಷಕ ಸಂಘ ಹಾಗೂ ಬಂಟ್ವಾಳ ಲಯನ್ಸ್ ಕ್ಲಬ್ನ ಸಹಯೋಗದಲ್ಲಿ "ವಿದ್ಯಾರ್ಥಿಗಳ ಭವಿಷ್ಯ ಮಾರ್ಗದರ್ಶನ" ಕಾರ್ಯಕ್ರಮ ಶಾಲಾ ಸಭಾಂಗಣದಲ್ಲಿ ನಡೆಯಿತು. ಲಯನ್ಸ್ ಕ್ಲಬ್ನ ಅಧ್ಯಕ್ಷ ಶ್ರೀನಿವಾಸ್ ಪೂಜಾರಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಮಂಗಳೂರು ಮನಶ್ಶಾಂತಿ ಕನ್ಸಲ್ಟಿಂಗ್ ರಿಸರ್ಚ್ ಹಾಗೂ ಟ್ರೈನಿಂಗ್ ಸೆಂಟರಿನ ನಿರ್ದೇಶಕ ರಮಿಲಾ ಶೇಖರ್ ಸಂಪನ್ಮೂಲ ವ್ಯಕ್ತಿಯಾಗಿ ಭಾಹವಹಿಸಿ ಮಾರ್ಗದರ್ಶನ ನೀಡಿದರು.
ಲಯನ್ಸ್ ಕ್ಲಬ್ನ ಉಪರಾಜ್ಯಪಾಲ ವಸಂತ ಶೆಟ್ಟಿ, ಕೋಆರ್ಡಿನೇಟರ್ ಉಮೇಶ್ ಆಚಾರ್, ಕೋಶಾಧಿಕಾರಿ ದೇವಿಕಾ ದಾಮೋದರ್, ಶಾಲಾ ಆಡಳಿತಾಧಿಕಾರಿ ಕೆ.ಮಹಾಬಲ ಆಳ್ವ, ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷ ಪಿ.ಕಿಶೋರ್ ಭಂಡಾರಿ, ಗೌರವಾಧ್ಯಕ್ಷ ಅಪ್ಪಯ್ಯ ಶೆಟ್ಟಿ, ಹೈಸ್ಕೂಲ್ ವಿಭಾಗದ ಮುಖ್ಯೋಪಾಧ್ಯಾಯಿನಿ ವಿದ್ಯಾ ಉಪಸ್ಥಿತರಿದ್ದರು.
ಲಯನ್ಸ್ ಕ್ಲಬ್ನ ಪದಾಧಿಕಾರಿಗಳಾದ ಪುಪ್ಪರಾಜ ಶೆಟ್ಟಿ, ಲಕ್ಷ್ಮಣ್, ವಸಂತಿ, ಯಲ್ ಶೆಟ್ಟಿ, ಅನಿತಾ ಶೆಟ್ಟಿ, ಶಿಕ್ಷಕ-ರಕ್ಷಕ ಸಂಘದ ಪಾದಾಧಿಕಾರಿಗಳು ಹಾಜರಿದ್ದರು. ಅಧ್ಯಾಪಕಿ ಪವಿತ್ರಾ ಸ್ವಾಗತಿಸಿ, ಶಶ್ ಮಿತಾ ವಂದಿಸಿದರು. ನೀತಾ ಕಾರ್ಯಕ್ರಮ ನಿರೂಪಿಸಿದರು.