ಅಂದರ್ ಬಾಹರ್: ನಾಲ್ವರ ಬಂಧನ
ಬ್ರಹ್ಮಾವರ, ನ.13: ಕೂರಾಡಿಯ ಕುಂಟೂರು ಹಾಡಿಯಲ್ಲಿ ನ.12ರಂದು ಸಂಜೆ ವೇಳೆ ಅಂದರ್ ಬಾಹರ್ ಇಸ್ಪೀಟ್ ಜುಗಾರಿ ಆಡುತ್ತಿದ್ದ ನಾಲ್ವರನ್ನು ಬ್ರಹ್ಮಾವರ ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಕೊಕ್ಕರ್ಣೆಯ ಸುರೇಶ ಆಚಾರಿ(37), ಕಚ್ಚೂರಿನ ಅಶೋಕ್ (50), ಹೊಸಾಳದ ವಲೇರಿಯನ್ ಗೊನ್ಸಾಲ್ವಿಸ್(52), ತಂತ್ರಾಡಿಯ ಅಣ್ಣಪ್ಪ (67) ಎಂದು ಗುರುತಿಸಲಾಗಿದೆ. ಇವರಿಂದ 5,230ರೂ. ನಗದು ವಶಪಡಿಸಿ ಕೊಳ್ಳಲಾಗಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story