ಎನ್ಎಂಪಿಟಿಯಲ್ಲಿ ಕಾರ್ಮಿಕ ಮೃತ್ಯು
ಮಂಗಳೂರು, ನ.15: ಎನ್ಎಂಪಿಟಿಯಲ್ಲಿರುವ ಎಸ್.ಕೆ. ಟ್ರಾನ್ಸ್ಪೊರ್ಟ್ನಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದ ವ್ಯಕ್ತಿಯೊಬ್ಬರು ರಕ್ತದೊತ್ತಡದಿಂದ ಅಸೌಖ್ಯಕ್ಕೀಡಾಗಿ ಮೃತಪಟ್ಟ ಘಟನೆ ಶುಕ್ರವಾರ ನಡೆದಿದೆ.
ಸ್ಥಳೀಯ ನಿವಾಸಿ ಸತ್ಯೇಂದ್ರದಾಸ್ (36) ಮೃತಪಟ್ಟ ವ್ಯಕ್ತಿ.
ಇವರು ಶುಕ್ರವಾರ ಬೆಳಗ್ಗೆ 6:30ಕ್ಕೆ ಹಾರ್ಬರ್ ಬರ್ತ್ ನಂಬರ್ 3ರಲ್ಲಿ ಕೆಲಸ ಮಾಡುತ್ತಿದ್ದಾಗ ಒಮ್ಮೆಲೆ ಕುಸಿದು ಬಿದ್ದಿದ್ದಾರೆ. ಕೂಡಲೇ ಅವರನ್ನು ಎನ್ಎಂಪಿಟಿಯ ಆ್ಯಂಬುಲೆನ್ಸ್ನಲ್ಲಿ ಚಿಕಿತ್ಸೆಗೆ ಕರೆದುಕೊಂಡು ಹೋದಾಗ ಪರೀಕ್ಷಿಸಿದ ವೈದ್ಯರು ಅಸ್ವಸ್ಥಕ್ಕೀಡಾದ ಸತ್ಯೇಂದ್ರದಾಸ್ ಮೃತಪಟ್ಟಿದ್ದಾರೆಂದು ತಿಳಿಸಿದ್ದಾರೆ.
ಮೃತದೇಹವನ್ನು ವೈದ್ಯಕೀಯ ಮರಣೋತ್ತರ ಪರೀಕ್ಷೆಗೆ ಒಳಪಡಿಸಿ ಮೃತದೇಹವನ್ನು ಬಿಟ್ಟುಕೊಡಲಾಗಿದೆ. ಈ ಕುರಿತು ಪಣಂಬೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
Next Story