ಅಕ್ರಮ ಜಾನುವಾರು ಸಾಗಾಟ: ಗುಜರಾತಿನ ನಾಲ್ವರ ಸೆರೆ
ಬೈಂದೂರು, ನ.15: ಬೈಂದೂರು ಹೊಸ ಬಸ್ ನಿಲ್ದಾಣ ಬಳಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ನ.14ರಂದು ಬೆಳಗಿನ ಜಾವ 4ಗಂಟೆ ಸುಮಾರಿಗೆ ಲಾರಿಯಲ್ಲಿ ಅಕ್ರಮವಾಗಿ ಜಾನುವಾರು ಸಾಗಾಟ ಮಾಡುತ್ತಿದ್ದ ನಾಲ್ವರನ್ನು ಬೈಂದೂರು ಪೊಲೀಸರು ಬಂಧಿಸಿದ್ದಾರೆ.
ಗುಜರಾತ್ ರಾಜ್ಯದ ಬರೋಡಾದ ಸಮೀರ್ ನಸ್ರುದ್ದೀನ್ ವಾಗಿಲ(32), ಮಲ್ಲಿಕ್ ಸಾಜಿದಾ ಸುಲ್ತಾನ್(19), ಮಲ್ಲಿಕ್ ಇದ್ರಿಸ್ ಇಸ್ಮಾಯಿಲ್(20), ಗುಜರಾತ್ ಬರೂಚಾ ಜಿಲ್ಲೆಯ ಸಾದಿಕ್ ಚಂದ್ರಸನ್ ಸಿಂಧಾ(37) ಬಂಧಿತ ಆರೋಪಿಗಳು.
ಗುಜರಾತ್ನಿಂದ ಮಂಗಳೂರಿಗೆ ಲಾರಿಯಲ್ಲಿ ಅಕ್ರಮವಾಗಿ ಜಾನುವಾರು ಗಳನ್ನು ಸಾಗಾಟ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿಯಂತೆ ಪೊಲೀಸರು ಕಾರ್ಯಾಚರಣೆ ನಡೆಸಿ, ಲಾರಿಯಲ್ಲಿದ್ದ ಒಟ್ಟು 33 ಎಮ್ಮೆಗಳನ್ನು ರಕ್ಷಿಸಿದ್ದಾರೆ. ಅದರಲ್ಲಿ ಎರಡು ಎಮ್ಮೆ ಮೃತಪಟ್ಟಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಈ ಬಗ್ಗೆ ಅಮಾಸೆಬೈಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story