ಮಲಾರ್: ಹುಬ್ಬುರ್ರಸೂಲ್ ಕಾನ್ಫರೆನ್ಸ್
ಮಂಗಳೂರು, ನ.17: ಕೊಣಾಜೆ ಎಸ್ವೈಎಸ್ ಮತ್ತು ಎಸ್ಸೆಸ್ಸೆಫ್ ಮಲಾರ್ ಶಾಖೆಯ ವತಿಯಿಂದ ಹುಬ್ಬುರ್ರಸೂಲ್ ಕಾನ್ಫರೆನ್ಸ್ ಹಾಗೂ ಸ್ವಲಾತ್ ಮಜ್ಲಿಸ್ ಕಾರ್ಯಕ್ರಮವು ಮಲಾರ್ ತಾಜುಲ್ ಉಲಮಾ ವೇದಿಕೆಯಲ್ಲಿ ಇತ್ತೀಚೆಗೆ ನಡೆಯಿತು.
ಸಮಸ್ತ ಕೇರಳ ಜಂಇಯ್ಯತುಲ್ ಉಲಮಾ ಉಪಾಧ್ಯಕ್ಷ ತಾಜುಶ್ಯರೀಅ ಅಲಿಕುಂಞಿ ಉಸ್ತಾದ್ ಉದ್ಘಾಟಿಸಿದರು. ಅಸೈಯ್ಯದ್ ಅಬ್ದುರ್ರಹ್ಮಾನ್ ಇಂಬಿಚ್ಚಿಕೋಯ ಬಾಯಾರ್ ತಂಙಳ್ ಸ್ವಲಾತ್ ಮಜ್ಲಿಸ್ ಮತ್ತು ಸೈಯದ್ ಶರಫುದ್ದೀನ್ ತಂಙಳ್ ಮೌಲಿದ್ ಮಜ್ಲಿಸ್ಗೆ ನೇತೃತ್ವ ನೀಡಿದ್ದರು.
ಅಬ್ದುಲ್ಲತೀಫ್ ಸಖಾಫಿ ಕಾಂತಪುರಂ ಮುಖ್ಯ ಪ್ರಭಾಷಣಗೈದರು. ಎಸ್ವೈಎಸ್ ಕರ್ನಾಟಕ ರಾಜ್ಯಾಧ್ಯಕ್ಷ ಜಿ.ಎಂ. ಕಾಮಿಲ್ ಸಖಾಫಿ, ಶಾಸಕ ಯು.ಟಿ ಖಾದರ್ ಶುಭ ಹಾರೈಸಿದರು.
ಮಂಗಳೂರು ತಾಪಂ ಅಧ್ಯಕ್ಷ ಮುಹಮ್ಮದ್ ಮೋನು, ದ.ಕ. ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಎನ್.ಎಸ್. ಕರೀಂ, ಸಂಘಟನಾ ಕಾರ್ಯದರ್ಶಿ ಝಕರಿಯಾ ಮಲಾರ್, ಪಾವೂರು ಗ್ರಾಪಂ ಅಧ್ಯಕ್ಷ ಫಿರೋಝ್ ಮಲಾರ್, ಕಾಂಗ್ರೆಸ್ ಹರೇಕಳ ವಲಯಾಧ್ಯಕ್ಷ ಬದ್ರುದ್ದೀನ್ ಫರೀದ್ ನಗರ, ಟೀಮ್ ಇಸಾಬ ಅಮೀರ್ ಹೈದರಾಲಿ ಸಖಾಫಿ ಇನ್ನೋಳಿ, ಮಲಾರ್ ಬದ್ರಿಯಾ ಜುಮಾ ಮಸೀದಿಯ ಅಧ್ಯಕ್ಷ ರಝಾಕ್ ಹಾಜಿ ಅಜ್ಮೀರ್ ಉಪಸ್ಥಿತರಿದರು.
ಎಸ್ವೈಎಸ್ ಮಲಾರ್ ಶಾಖೆಯ ಉಪಾಧ್ಯಕ್ಷ ಹೈದರ್ ಅಲಿ ಹಿಮಾಮಿ ಸ್ವಾಗತಿದರು. ಅಧ್ಯಕ್ಷ ಅಬ್ದುಲ್ ಅಝೀಝ್ ಮದನಿ ಧ್ವಜಾ ರೋಹಣಗೈದರು. ಕಾರ್ಯದರ್ಶಿ ಅಬ್ದುಲ್ ಅಝೀಝ್ ಹಿಮಾಮಿ ವಂದಿಸಿದರು.