ಜಾರದಗುಡ್ಡ ಉರೂಸ್ನ ಧ್ವಜಾರೋಹಣ
ಮಂಗಳೂರು, ನ.17: ಜನವರಿಯಲ್ಲಿ ನಡೆಯಲಿರುವ ಬೋಳಿಯಾರ್ ಗ್ರಾಮದ ಜಾರದಗುಡ್ಡ ರಿಫಾಯಿಯಾ ಜುಮಾ ಮಸೀದಿ ವಲಿಯುಲ್ಲಾಹಿ ದರ್ಗಾ ಶರೀಫ್ ಉರೂಸ್ಗೆ ಪೂರ್ವಭಾವಿಯಾಗಿ ರವಿವಾರ ಧ್ವಜಾರೋಹಣ ಕಾರ್ಯಕ್ರಮ ಜರುಗಿತು.
ಈ ಸಂದರ್ಭ ಮಾತನಾಡಿದ ಕೆ.ಎಸ್.ಆಟಕೋಯ ತಂಙಳ್ ಕುಂಬೋಳ್ ವೈದ್ಯರಿಗೆ ಜಾತಿ, ಧರ್ಮದ ಅಡ್ಡಿಯಿಲ್ಲ, ಅದೇ ರೀತಿ ಮಹಾತ್ಮರಿಗೂ ಜಾತಿ, ಧರ್ಮ, ಭೇದ ಎಂಬುದಿಲ್ಲ. ಎಲ್ಲರನ್ನೂ ಸಮಾನವಾಗಿ ನೋಡುವವರನ್ನೇ ಮಹಾತ್ಮರು ಎನ್ನಲಾಗುತ್ತದೆ ಎಂದು ಹೇಳಿದರು.
ಜಾರದಗುಡ್ಡ ರಿಫಾಯಿಯಾ ಜುಮಾ ಮಸೀದಿಯ ಖತೀಬ್ ಸೈಯದ್ ಅಮೀರ್ ತಂಙಳ್, ಮಂಗಳೂರು ತಾಪಂ ಅಧ್ಯಕ್ಷ ಮುಹಮ್ಮದ್ ಮೋನು, ಬೋಳಿಯಾರ್ ಗ್ರಾಪಂ ಅಧ್ಯಕ್ಷ ಸತೀಶ್ ಆಚಾರ್ಯ, ಸದಸ್ಯ ಪ್ರಶಾಂತ್ ಗಟ್ಟಿ, ಮಾಜಿ ಅಧ್ಯಕ್ಷ ಭಾಸ್ಕರ ಶೆಟ್ಟಿ, ಮಸೀದಿಯ ಅಧ್ಯಕ್ಷ ಸಮೀರ್ ಅಹ್ಮದ್, ಮೇಲಂಗಡಿ ಎಂಜೆಎಂ ಅಧ್ಯಕ್ಷ ಮುಸ್ತಫಾ ಅಬ್ದುಲ್ಲಾ, ತಾಪಂ ಸದಸ್ಯ ಅಬ್ದುಲ್ ಜಬ್ಬಾರ್ ಬೋಳಿಯಾರ್, ಗ್ರಾಪಂ ಸದಸ್ಯ ರಿಯಾಝ್ ಸಿ., ಬಶೀರ್ ಮುಡಿಪು, ಅರ್. ಮುಹಮ್ಮದ್ ಮದನಿ, ಅಬೂಬಕರ್ ಅಝ್ಹರಿ, ಹಮೀದ್ ಮುಸ್ಲಿಯಾರ್, ಅಬ್ದುಲ್ಲಾ, ಅಬೂಬಕರ್ ಮುಡಿಪು, ಬದ್ರುದ್ದೀನ್ ಅಹ್ಸನಿ ಉಪಸ್ಥಿತರಿದ್ದರು.
ಮದ್ರಸದ ಸದರ್ ಮುಅಲ್ಲಿಂ ಅಬೂ ಅನಸ್ ಮದನಿ ವಳಾಲ್ ಸ್ವಾಗತಿಸಿದರು.