ಬಂಟ್ವಾಳ : ರಾಷ್ಟ್ರೀಯ ಸ್ವಯಂ ಸೇವಕ ಸಂಘದಿಂದ ಪಥಸಂಚಲನ
ಬಂಟ್ವಾಳ, ನ. 17: ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವತಿಯಿಂದ ತಾಲೂಕು ಮಟ್ಟದ ಪಥಸಂಚಲನ ಬಿ.ಸಿ.ರೋಡಿನ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದಿಂದ ಬಂಟ್ವಾಳ ತಿರುಮಲ ವೆಂಕಟರಮಣ ದೇವಾಲಯದವರೆಗೆ ನಡೆಯಿತು.
ಬಳಿಕ ತಿರುಮಲ ವೆಂಕಟರಮಣ ಕಲ್ಯಾಣ ಮಂಟಪದಲ್ಲಿ ಬೌದ್ಧಿಕ ಕಾರ್ಯಕ್ರಮ ನಡೆಯಿತು. ಫಥಸಂಚಲನದಲ್ಲಿ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಭಾಗವಹಿಸಿದರು.
ಬಂಟ್ವಾಳ ತಾಲೂಕಿನ ತಾಲೂಕು ಪಥಸಂಚಲನದಲ್ಲಿ ಮಂಗಳೂರು ವಿಭಾಗ ಕಾರ್ಯವಾಹ ನ.ಸೀತಾರಾಮ ಸುಳ್ಯ ಬೌದ್ಧಿಕ ನಡೆಸಿಕೊಟ್ಟರು. ಸಂಘಚಾಲಕರಾದ ಕೊಡ್ಮಣ್ ಕಾಂತಪ್ಪ ಶೆಟ್ಟಿವಿನೋದ್ ಕುಮಾರ್ ಕೊಡ್ಮಣ್ ಜಿಲ್ಲಾ ಸಹಕಾರ್ಯವಾಹತಾಲೂಕು ಕಾರ್ಯವಾಹ , ದೀಕ್ಷಿತ್ ತುಂಬೆ ಉಪಸ್ಥಿತಿಯಲ್ಲಿ ನಡೆಯಿತು.