ಈಜಲು ಹೋದ ಯುವಕ ಮೃತ್ಯು
ಶಿರ್ವ, ನ.18: ಕುರ್ಕಾಲು ಗ್ರಾಮದ ಮನ್ನಾಲ್ ಅಣೆಕಟ್ಟು ಬಳಿಯ ಹೊಳೆ ಯಲ್ಲಿ ಈಜುತ್ತಿದ್ದ ಯುವಕನೋರ್ವ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ನ.17ರಂದು ಸಂಜೆ ವೇಳೆ ನಡೆದಿದೆ.
ಮೃತರನ್ನು ಶಿವಕುಮಾರ್(25) ಎಂದು ಗುರುತಿಸಲಾಗಿದೆ. ಹೊಳೆಯಲ್ಲಿ ಈಜಲು ಹೋದ ಇವರು ಅಕಸ್ಮಿಕವಾಗಿ ಕಾಲು ಜಾರಿ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.
ಈ ಬಗ್ಗೆ ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story