ಬಂಟ್ವಾಳ ತೌಹೀದ್ ಆಂಗ್ಲ ಮಾಧ್ಯಮ ಶಾಲಾ ಕ್ರೀಡೋತ್ಸವ
ಬಂಟ್ವಾಳ, ನ. 18: ತೌಹೀದ್ ಆಂಗ್ಲ ಮಾಧ್ಯಮ ಶಾಲಾ ಕ್ರೀಡೋತ್ಸವ ರಾಜ್ಯ ಗೇರು ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಹಾಜಿ ಬಿ.ಎಚ್.ಬಿ ಖಾದರ್ ಅವರ ಅಧ್ಯಕ್ಷತೆಯಲ್ಲಿ ಜರುಗಿತು.
ಬಂಟ್ವಾಳ ಎಎಸ್ಪಿ ಸೈದುಲು ಅಡಾವತ್ ಅವರು ಅವರು ಬಲೂನ್ಗಳನ್ನು ಹಾರಿಸುವ ಮೂಲಕ ಕ್ರೀಡಾಕೂಟವನ್ನು ಉದ್ಘಾಟಿಸಿ ಮಕ್ಕಳ ಶಿಸ್ತಿನ ಕವಾಯತಿನ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಶಾಲಾ ಸಂಚಾಲಕ ಮುಹಮ್ಮದ್ ಸಗೀರ್, ಆಡಳಿತ ಮಂಡಳಿಯ ಸದಸ್ಯರಾದ ಬಿ.ಎ ಮುಹಮ್ಮದ್, ಮುಹಮ್ಮದ್ ಇಸ್ಮಾಯಿಲ್, ಪಿಟಿಎ ಅಧ್ಯಕ್ಷ ಮುಹಮ್ಮದ್ ಹನೀಫ್, ಉಪಾಧ್ಯಕ್ಷ ಅಮೀರ್ ಅಲಿ ಉಪಸ್ಥಿತರಿದ್ದರು. ತೌಹೀದ್ ಪ್ರೌಢಶಾಲಾ ಮುಖ್ಯ ಶಿಕ್ಷಕಿ ಮೆಟಿಲ್ಡಾ ಡಿಕೋಸ್ತಾ, ಪ್ರಾಥಮಿಕ ವಿಭಾಗದ ಮುಖ್ಯ ಶಿಕ್ಷಕಿ ರಚನಾ ಎನ್ ಹಾಜರಿದ್ದರು.
6 ತಂಡಗಳಲ್ಲಿ ಶಾಲಾ ಬ್ಯಾಂಡಿನೊಂದಿಗೆ ವಿದ್ಯಾರ್ಥಿಗಳು ಪಥ ಸಂಚಲನವನ್ನು ದೈಹಿಕ ಶಿಕ್ಷಕಿ ಗಾಯತ್ರಿ ಬಿ.ಸಿ. ಮಾರ್ಗದರ್ಶನದಲ್ಲಿ ಅಮೋಘವಾಗಿ ನಡೆಸಿಕೊಟ್ಟರು. ಕಬ್ಸ್, ಬುಲ್ಬುಲ್, ಗೈಡ್ಸ್ ಹಾಗೂ ಸ್ಕೌಟ್ ವಿದ್ಯಾರ್ಥಿಗಳು ಪಥ ಸಂಚಲನದಲ್ಲಿ ಭಾಗವಹಿಸಿದರು. ವಿವಿಧ ಆಟೋಟ ಪಂದ್ಯಾಟಗಳನ್ನು ನಡೆಸಿ ವಿಜೇತರಿಗೆ ಪದಕಗಳನ್ನು ವಿತರಿಸಲಾಯಿತು. ಶಿಕ್ಷಕಿಯರಾದ ಶರಲ್ ನೊರೋನ್ಹ ಸ್ವಾಗತಿಸಿ, ಗಾಯತ್ರಿ ಬಿ.ಸಿ. ವಂದಿಸಿ, ಮರಿಯಾ ಹಾಗೂ ಕಾವ್ಯ ನಿರೂಪಿಸಿದರು.