ಹೊಸಂಗಡಿ ಶೂಟೌಟ್ ಪ್ರಕರಣ : ಓರ್ವ ಸೆರೆ
ಮಂಜೇಶ್ವರ : ಹೊಸಂಗಡಿಯಲ್ಲಿ ಶೂಟೌಟ್ ನಡೆಸಿದ ಪ್ರಕರಣದಲ್ಲಿ ಓರ್ವ ಆರೋಪಿಯನ್ನು ಮಂಜೇಶ್ವರ ಪೊಲೀಸರು ಬಂಧಿಸಿದ್ದಾರೆ.
ಬಂಧಿತನನ್ನು ಮಂಜೇಶ್ವರ ಬೆಜ್ಜಂಗಳದ ನಿವಾಸಿ ಮುಹಮ್ಮದ್ ಶಾಕಿರ್ (24) ಎಂದು ಗುರುತಿಸಲಾಗಿದೆ.
ಈತನನ್ನು ಮಂಜೇಶ್ವರ ಎಸ್.ಐ ಬಾಲಚಂದ್ರನ್ ನೇತೃತ್ವದ ಪೊಲೀಸರು ಬಂಧಿಸಿದ್ದಾರೆ. ಇನ್ನೋರ್ವ ಆರೋಪಿ ಅಬ್ದುಲ್ ರಹಿಮಾನ್ ಒಂದು ವಾರಗಳ ಹಿಂದೆ ನ್ಯಾಯಾಲಯದಲ್ಲಿ ಶರಣಾಗಿದ್ದನು. ಪಿಸ್ತೋಲು ಹಸ್ತಾಂತರಿಸಲು ಶಾಕಿರ್ ಅಬ್ದುಲ್ ರಹಿಮಾನ್ ಜೊತೆ ತಲುಪಿದ್ದನು ಎಂದು ಪೊಲೀಸರು ತಿಳಿಸಿದ್ದಾರೆ. ಹೆಚ್ಚುವರಿ ತನಿಖೆಗಾಗಿ ಈತನ್ನು ಪೊಲೀಸ್ ಕಸ್ಟಡಿಗೆ ನೀಡುವಂತೆ ನ್ಯಾಯಾಲಯದಲ್ಲಿ ಅರ್ಜಿ ನೀಡುವುದಾಗಿ ಪೊಲೀಸರು ಹೇಳಿದ್ದಾರೆ.
Next Story