ತಳಿಪ್ಪರಂಬ : ಜಾಮಿಅ: ಖುವ್ವತ್ತುಲ್ ಇಸ್ಲಾಮ್ ಅರಬಿಕ್ ಕಾಲೇಜ್ ನಲ್ಲಿ ಸಮ್ಮೇಳನ
ಮಂಗಳೂರು : ಜಾಮಿಅ: ಖುವ್ವತ್ತುಲ್ ಇಸ್ಲಾಮ್ ಅರಬಿಕ್ ಕಾಲೇಜ್ ತಳಿಪ್ಪರಂಬ ಇದರ ನೂರನೇ ವಾರ್ಷಿಕ ಸನದುದಾನ ಮಹಾ ಸಮ್ಮೇಳನ ಮತ್ತು ಸಮಾರೋಪ ಸಮಾರಂಭ ನಡೆಯಲಿದೆ.
ನ. 21 ರಂದು ಬೆಳಗ್ಗೆ ಹುಬ್ಬುನ್ನೆಬಿ ಮೌಲಿದ್ ಮಜ್ಲೀಸ್ ನಡೆಯಲಿದೆ. ಕೆಪಿ ಮುಹಮ್ಮದ್ ಕುಂಞಿ ಹಾಜಿ ಅಧ್ಯಕ್ಷತೆ ವಹಿಸಲಿದ್ದಾರೆ ಸಂಜೆ 6 ಗಂಟೆಗೆ ನವೀಕರಿಸಿದ ಮಸೀದಿಯನ್ನು ಪಾಣಕ್ಕಾಡ್ ಸಯ್ಯದ್ ಮುನವ್ವರಲಿ ಶಿಹಾಬ್ ತಂಙಳ್ ಉದ್ಘಾಟಿಸಲಿದ್ದಾರೆ.
6:30 ಕ್ಕೆ ಕಾಲೇಜ್ ಅ್ಯಂಡ್ ಅಡ್ ಮಿನಿಸ್ಟ್ರಟಿವ್ ಉದ್ಘಾಟನೆ ಹಾಗೂ ಕುತುಬ್ ಖಾನ ಅ್ಯಂಡ್ ಲೈಬ್ರರಿ ಉದ್ಘಾಟನೆ ನಡೆಯಲಿದೆ. ರಾತ್ರಿ 7 ಕ್ಕೆ ಮಹಾ ಸಮ್ಮೇಳನ ಸಮಾರೋಪ ಸಮಾರಂಭ ಅಝ್ ಹರಿ ಕಾಮಿಲ್ ಅಲ್ ಅಝ್ ಹರಿ ಸನದುದಾನ ಸಮ್ಮೇಳನ ಸಮಸ್ತ ಅದ್ಯಕ್ಷರಾದ ಸೈಯದ್ ಜಿಪ್ರಿ ತಂಙಳ್ ಉದ್ಘಾಟಿಸಲಿರುವರು.
ಅಂಜರಕಂಡಿ ಅಬ್ದುರ್ರಹ್ಮಾನ್ ಮುಸ್ಲಿಯಾರ್ ಅದ್ಯಕ್ಷತೆ ವಹಿಸಲಿದ್ದಾರೆ. ಸಮಸ್ತ ಕಾರ್ಯದರ್ಶಿ ಶೈಖುನಾ ಆಲಿ ಕುಟ್ಟಿ ಉಸ್ತಾದ್ ಸನದುದಾನ ಭಾಷಣ ಮಾಡಲಿದ್ದಾರೆ ಎಂದು ಕರ್ನಾಟಕ ರಾಜ್ಯ ಅಝ್ಹರೀಸ್ ಉಲಮಾ ಒಕ್ಕೂಟದ ಅಧ್ಯಕ್ಷ ನಝೀರ್ ಅಝ್ ಹರಿ ಬೊಳ್ಮಿನಾರ್ ತಿಳಿಸಿದ್ದಾರೆ.