ನೇಣುಬಿಗಿದು ಆತ್ಮಹತ್ಯೆ
ಮಂಗಳೂರು, ನ.21: ಕಾವೂರು ಕೊರಂಟಾಡಿಗುಡ್ಡೆಯಲ್ಲಿ ವ್ಯಕ್ತಿಯೊಬ್ಬರು ಕಿಟಕಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಕೊರಂಟಾಡಿಗುಡ್ಡೆ ನಿವಾಸಿ ಲಕ್ಷ್ಮಣ (65) ಮೃತಪಟ್ಟವರು.
ಹಿಟ್ಟು ರುಬ್ಬುವ ಕೆಲಸ ಮಾಡಿಕೊಂಡಿದ್ದ ಇವರು ಕೆಲವು ಸಮಯದಿಂದ ಆ ಕೆಲಸ ಬಿಟ್ಟು ಕೂಲಿ ಕೆಲಸಕ್ಕೆ ಹೋಗುತ್ತಿದ್ದರು. ಇವರ 6 ಮಕ್ಕಳಲ್ಲಿ ಒಬ್ಬ ಅಪಘಾತಕ್ಕೀಡಾಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಗುರುವಾರ ಮಗನನ್ನು ನೋಡಲು ಆಸ್ಪತ್ರೆಗೆ ತೆರಳಿದವರು ಮರಳಿ ಮನೆಗೆ ಬಂದು ರೂಮಿಗೆ ಹೋಗಿದ್ದಾರೆ. ಇದನ್ನು ಯಾರೂ ಗಮನಿಸಿರಲಿಲ್ಲ. ಸಂಜೆ ಮನೆಯವರು ರೂಮಿಗೆ ಹೋಗಿ ನೋಡುವಾಗ ಕಿಟಕಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಈ ಬಗ್ಗೆ ಕಾವೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
Next Story