ಉಪ್ಪಿನಂಗಡಿ: ಟ್ಯಾಂಕರ್- ಕಾರು ಢಿಕ್ಕಿ; ಇಬ್ಬರಿಗೆ ಗಾಯ
ಉಪ್ಪಿನಂಗಡಿ: ಟ್ಯಾಂಕರ್ ಹಾಗೂ ಕಾರು ಮಧ್ಯೆ ನಡೆದ ಅಪಘಾತದಲ್ಲಿ ಕಾರಿನಲ್ಲಿದ್ದ ಇಬ್ಬರು ಗಾಯಗೊಂಡ ಘಟನೆ ಉಪ್ಪಿನಂಗಡಿ ಬಳಿಯ ಮಠ ಎಂಬಲ್ಲಿಯ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಬುಧವಾರ ನಡೆದಿದೆ.
ಬಂಟ್ವಾಳದಿಂದ ಬೆಂಗಳೂರು ಕಡೆಗೆ ತೆರಳುತ್ತಿದ್ದ ಕಾರಿಗೆ ಮಠ ಎಂಬಲ್ಲಿ ಟ್ಯಾಂಕರ್ ಡಿಕ್ಕಿಯಾಯಿತು. ಘಟನೆಯಲ್ಲಿ ಕಾರಿನಲ್ಲಿದ್ದ ಮುಹಮ್ಮದ್ ಅಝೀಝ್ (26) ಹಾಗೂ ಜಾರ್ಖಂಡ್ ಮೂಲದ ಮುಹಮ್ಮದ್ ಯೂಸುಫ್ (44) ಎಂಬವರಿಗೆ ಗಾಯವಾಗಿದೆ. ಅಪಘಾತ ಸಂಭವಿಸಿದಾಕ್ಷಣ ಸ್ಥಳೀಯರಾದ ಝಕಾರಿಯಾ ,ರಹೀಂ,ಸಂಶುದ್ದೀನ್, ನಝೀರ್ ಎಂಬವರು ತುರ್ತು ಸ್ಪಂದಿಸಿ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸುವಲ್ಲಿ ನೆರವಾದರು ಎಂದು ತಿಳಿದುಬಂದಿದೆ.
Next Story