ಶ್ರೀಸುಬ್ರಹ್ಮಣ್ಯ ದೇವಸ್ಥಾನದ ಸಮುದಾಯ ಭವನ ಉದ್ಘಾಟನೆ
ಪಡುಬಿದ್ರೆ, ನ.30: ಅದಾನಿ ಸಮೂಹದ ಯುಪಿಸಿಎಲ್ ಸಂಸ್ಥೆಯು ತನ್ನ ಸಿಎಸ್ಆರ್ ನಿಧಿಯಡಿ 35 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿದ ಪಡುಬಿದ್ರಿ ಗ್ರಾಪಂ ವ್ಯಾಪ್ತಿಯ ಶ್ರೆಸುಬ್ರಹ್ಮಣ್ಯ ದೇವಸ್ಥಾನದ ಸಮುದಾಯ ಭವನವನ್ನು ಅದಾನಿ-ಯುಪಿಸಿಎಲ್ನ ಅಧ್ಯಕ್ಷ ಕಿಶೋರ್ ಆಳ್ವ ಇಂದು ಉದ್ಘಾಟಿಸಿದರು.
ಯುಪಿಸಿಎಲ್ ಸಂಸ್ಥೆಯು ಸಿಎಸ್ಆರ್ ಯೋಜನೆಯಡಿ 22.73 ಕೋಟಿ ರೂ.ಗಳಷ್ಟು ವಿಶೇಷ ಅನುದಾನವನ್ನು ಕೂಡ ಮೀಸಲಿಟ್ಟಿದೆ. ಗ್ರಾಪಂ ಗಳ ಕ್ರಿಯಾಯೋಜನೆಯ ಪ್ರಕಾರ ಗ್ರಾಮಾಭಿವೃದ್ಧಿ ಕೆಲಸಗಳನ್ನು ನಿರ್ವಹಿಸುತ್ತ ಬಂದಿದೆ. ಪಡುಬಿದ್ರಿ ಗ್ರಾಪಂಗೆ 3 ವರ್ಷಗಳ ಅವಧಿಗೆ 3 ಕೋಟಿ ರೂ. ಅನುದಾನವನ್ನು ಘೋಷಿಸಿದ್ದು, ಅದರಡಿಯಲ್ಲಿ ಈಗಾಗಲೇ ಸುಮಾರು 58 ಲಕ್ಷ ರೂ. ವೆಚ್ಚದಲ್ಲಿ ಗ್ರಾಪಂ ಕಟ್ಟಡದ ನೆಲಮಹಡಿ ನಿರ್ಮಾಣ ಮತ್ತು 40 ಲಕ್ಷ ವೆಚ್ಚದಲ್ಲಿ ಪಾದೆಬೆಟ್ಟು ದೇವಸ್ಥಾನದಿಂದ ರಾಘವೇಂದ್ರ ಮಠದ ರಸ್ತೆ ಅಭಿವೃಧ್ಧಿ ಕಾರ್ಯಗಳನ್ನು ಮಾಡಲಾಗಿದೆ ಎಂದು ಕಿಶೋರ್ ಆಳ್ವ ತಿಳಿಸಿದರು.
ಅದಮಾರು ಮಠದ ಶ್ರೆವಿಶ್ವಪ್ರಿಯ ತೀರ್ಥ ಸ್ವಾಮೀಜಿ ಆಶೀರ್ವಚನ ನೀಡಿದರು. ಪಾದೆಬೆಟ್ಟು ರಾಜ್ಕಿರಣ್ ಕರುಣಾಕರ ಶೆಟ್ಟಿ, ಸಭಾಭವನ ನಿರ್ಮಾಣ ಸಮಿತಿಯ ಮಟ್ಟಾರ್ ರತ್ನಾಕರ ಹೆಗ್ಡೆ, ಪಾಂಡ್ಯಾರು ಬರ್ಪಾಣೆ ಜೀತೇಂದ್ರ ಶೆಟ್ಟಿ, ಪಿ.ರಾಮಚಂದ್ರ ಆಚಾರ್ಯ, ಪಿ.ಶ್ರೆನಿವಾಸ ಆಚಾರ್ಯ, ಸುಭಾಷ್ ಡಿ.ಶೆಟ್ಟಿ, ಕುತ್ಯಾರು ಪ್ರಸಾದ್ ಶೆಟ್ಟಿ ಉಪಸ್ಥಿತರಿದ್ದರು.