ಗೃಹರಕ್ಷಕರ ಪಶ್ವಿಮ ವಲಯ ವೃತ್ತಿಪರ ಕ್ರೀಡಾಕೂಟಕ್ಕೆ ಚಾಲನೆ
ಮಂಗಳೂರು, ಡಿ.2: ಗೃಹರಕ್ಷಕರ ಪಶ್ಚಿಮ ವಲಯ ಮಟ್ಟದ ವೃತ್ತಿಪರ ಕ್ರೀಡಾಕೂಟಕ್ಕೆ ರವಿವಾರ ನಗರದ ಪೊಲೀಸ್ ಪೆರೇಡ್ ಮೈದಾನದಲ್ಲಿ ಚಾಲನೆ ನೀಡಲಾಯಿತು.
ತುಕಡಿ ನಾಯಕರಾದ ವಸಂತ್ ಕುಮಾರ್ರ ನೇತೃತ್ವದಲ್ಲಿ ಅತಿಥಿಗಳಿಗೆ ಗೌರವ ವಂದನೆ ಸಲ್ಲಿಸಲಾಯಿತು. ಮಂಗಳೂರು ಘಟಕದ ಚೇತನ್ ಕ್ರೀಡಾಜ್ಯೋತಿಯನ್ನು ನಿರ್ವಹಿಸಿದರು. ಉಪ ಸಮಾದೇಷ್ಟ ರಮೇಶ್ ಪ್ರತಿಜ್ಞಾ ವಿಧಿ ಭೋದಿಸಿ, ಸ್ವಾಗತಿಸಿದರು.
ಮುಖ್ಯ ಅಗ್ನಿಶಾಮಕಾಧಿಕಾರಿ ಟಿ.ಎನ್. ಶಿವಶಂಕರ ಕಾರ್ಯಕ್ರಮ ಉದ್ಘಾಟಿಸಿ ನಾಲ್ಕು ಜಿಲ್ಲೆಯವರು ಸೇರಿ ಆಟ ಆಡುವ ಈ ಕ್ರೀಡಾಕೂಟವು ಒಂದು ಹಬ್ಬವಾಗಿದೆ. ಸಮವಸ್ತ್ರ ಧರಿಸುವ ಸಿಬ್ಬಂದಿಗೆ ಕ್ರೀಡೆಯೂ ಅತಿ ಅಗತ್ಯ ಎಂದು ನುಡಿದರು.
ಜಿಲ್ಲಾ ಗೃಹರಕ್ಷಕದಳದ ಸಮಾದೇಷ್ಠ ಡಾ. ಮುರಲೀ ಮೋಹನ್ ಚೂಂತಾರು ಶುಭ ಹಾರೈಸಿದರು. ಘಟಕಾಧಿಕಾರಿ ಮಾರ್ಕ್ಶೇರ್ ವಂದಿಸಿದರು. ಕಚೇರಿ ಅಧೀಕ್ಷಕ ರತ್ನಾಕರ್ ಮತ್ತಿತರರುಉಪಸ್ಥಿತರಿದ್ದರು.
Next Story