ಡಿ. 6 : ಯುನಿವೆಫ್ ಉಳ್ಳಾಲ ಶಾಖೆಯಿಂದ ಮೊಹಲ್ಲಾ ಸಭೆ
ಮಂಗಳೂರು : ಯುನಿವೆಫ್ ಕರ್ನಾಟಕ 2019ರ ನ. 22 ರಿಂದ 2020ರ ಜ. 24ರವರೆಗೆ "ಮಾನವ ಸಂಬಂಧಗಳು ಮತ್ತು ಪ್ರವಾದಿ ಮುಹಮ್ಮದ್ (ಸ)" ಎಂಬ ಕೇಂದ್ರೀಯ ವಿಷಯದಲ್ಲಿ ಹಮ್ಮಿಕೊಂಡಿರುವ "ಅರಿಯಿರಿ ಮನುಕುಲದ ಪ್ರವಾದಿಯನ್ನು" ಅಭಿಯಾನದ ಅಂಗವಾಗಿ ಉಳ್ಳಾಲ ಶಾಖೆಯ ವತಿಯಿಂದ "ಮೊಹಲ್ಲಾ ಸಭೆ" ಡಿ.6ರಂದು ಇಶಾ ನಮಾಝ್ ಬಳಿಕ (ರಾತ್ರಿ 8 ಗಂಟೆಗೆ) ಉಳ್ಳಾಲ ಮುಕ್ಕಚ್ಚೇರಿ ಬಿರ್ಲಾ ಕಂಪೌಂಡ್ ನಲ್ಲಿರುವ ನಿಮ್ರಾ ಮಸೀದಿಯಲ್ಲಿ ಹಮ್ಮಿಕೊಳ್ಳಲಾಗಿದೆ.
"ಪ್ರಚಲಿತ ವಿದ್ಯಮಾನ ಮತ್ತು ಪ್ರವಾದಿಯವರ ಬೋಧನೆ" ಎಂಬ ವಿಷಯದಲ್ಲಿ ಚರ್ಚಾ ಕೂಟ ನಡೆಯಲಿದ್ದು ಸಂಪನ್ಮೂಲ ವ್ಯಕ್ತಿಯಾಗಿ ಯುನಿವೆಫ್ ಅಧ್ಯಕ್ಷ ರಫೀಉದ್ದೀನ್ ಕುದ್ರೋಳಿ ಭಾಗವಹಿಸಲಿದ್ದಾರೆ ಎಂದು ಕಾರ್ಯಕ್ರಮ ಸಂಚಾಲಕ ಸರ್ಫರಾಝ್ ನವಾಝ್ ತಿಳಿಸಿದ್ದಾರೆ.
Next Story