ಬಿಕರ್ನಕಟ್ಟೆ: ಬಾಲಯೇಸು ವಾರ್ಷಿಕ ಮಹೋತ್ಸವ
ಮಂಗಳೂರು, ಜ.14: ಬಿಕರ್ನಕಟ್ಟೆ ಕಾರ್ಮೆಲ್ ಹಿಲ್ ಬಾಲಯೇಸುವಿನ ಪುಣ್ಯಕ್ಷೇತ್ರದಲ್ಲಿ ವಾರ್ಷಿಕ ಮಹೋತ್ಸವವು ಗುರುವಾರ ವಿಜೃಂಭಣೆಯಿಂದ ಜರಗಿತು. ಸಂಜೆ ಭೋಪಾಲ್ನ ಬಿಷಪ್ ವಂ.ಡಾ.ಲೀಯೊ ಕರ್ನೆಲಿಯೊ ನೇತೃತ್ವದಲ್ಲಿ ವಿಶೇಷ ಬಲಿಪೂಜೆ ನೆರವೇರಿತು.
ಕರ್ನಾಟಕ- ಗೋವಾ ಕ್ರೈಸ್ತ ಪ್ರಾಂತದ ಪ್ರಾಂತಾಧಿಕಾರಿ ವಂ.ಡಾ.ಚಾರ್ಲ್ಸ್ ಸೆರಾವೊ ಇನ್ನಿತರ ಧರ್ಮಗುರುಗಳು, ಭಗಿನಿಯರು ಹಾಗೂ ಸಾವಿರಾರು ಭಕ್ತರು ಈ ಸಂಭ್ರಮದಲ್ಲಿ ಪಾಲ್ಗೊಂಡರು. ಬೆಳಗ್ಗೆಯಿಂದಲೇ ಕೊಂಕಣಿ, ಮಲಯಾಳಂ, ಇಂಗ್ಲಿಷ್, ಕನ್ನಡ ಭಾಷೆಗಳಲ್ಲಿ ಬಲಿಪೂಜೆಯನ್ನು ಹಾಗೂ ವ್ಯಾದಿಷ್ಟರಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.
ಪುಣ್ಯಕ್ಷೇತ್ರದ ನಿರ್ದೇಶಕ ವಂ.ಎಲಾಯಸ್ ಡಿಸೋಜ, ವಂ.ಪ್ರಕಾಶ್ ಡಿಕುನ್ಹ ವಂ.ದೀಪ್ ಫೆರ್ನಾಂಡಿಸ್, ವಂ.ಬರ್ನಾಬಾಸ್ ಮೋನಿಸ್, ವಂ. ಜೊಸ್ಸಿ ಡಿಸೋಜ ಮತ್ತಿತರರು ಉಪಸ್ಥಿತರಿದ್ದರು.
ಕಾರ್ಮೆಲ್ ಹಿಲ್ ಧರ್ಮಗುರು ವಂ.ಜೋ ತಾವ್ರೊ ಸ್ವಾಗತಿಸಿ, ವಂದಿಸಿದರು.
Next Story