ಹುಲಿಕಲ್ ಘಾಟಿಯಲ್ಲಿ ನಿಯಂತ್ರಣ ತಪ್ಪಿ15 ಅಡಿ ಆಳಕ್ಕೆ ಬಿದ್ದ ಲಾರಿ: ಓರ್ವ ಮೃತ್ಯು
ಅಮಾಸೆಬೈಲು, ಡಿ.12: ಹೊಸಂಗಡಿ ಗ್ರಾಮದ ಹುಲಿಕಲ್ ಘಾಟಿ ಕೊನೆಯ ಎರಡನೆ ತಿರುವಿನಲ್ಲಿ ಮಿನಿ ಕ್ಯಾಂಟರ್ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ15 ಅಡಿ ಆಳಕ್ಕೆ ಬಿದ್ದ ಪರಿಣಾಮ ಲಾರಿಯಲ್ಲಿದ್ದ ಓರ್ವ ಮೃತಪಟ್ಟ ಘಟನೆ ಡಿ.12ರಂದು ಬೆಳಗ್ಗೆ 7.15ರ ಸುಮಾರಿಗೆ ನಡೆದಿದೆ.
ಮೃತರನ್ನು ಬಸವರಾಜ್(48) ಎಂದು ಗುರುತಿಸಲಾಗಿದೆ. ಲಾರಿಯಲ್ಲಿದ್ದ ವಿನಾಯಕ ಎಂಬವರು ಗಾಯಗೊಂಡಿದ್ದಾರೆ. ಹುಲಿಕಲ್ ಕಡೆಯಿಂದ ಹೊಸಂಗಡಿ ಕಡೆಗೆ ಹೋಗುತ್ತಿದ್ದ ಮಿನಿ ಕ್ಯಾಂಟರ್ ಲಾರಿಯನ್ನು ಚಾಲಕ ರುದ್ರೇಶ ಎಂಬಾತ ಅತಿವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿದ ಪರಿಣಾಮ ಲಾರಿಯು ನಿಯಂತ್ರಣ ತಪ್ಪಿತಗ್ಗು ಪ್ರದೇಶಕ್ಕೆ ಬಿತ್ತೆನ್ನಲಾಗಿದೆ. ಇದರ ಪರಿಣಾಮ ಲಾರಿಯು ಸಂಪೂರ್ಣ ಜಖಂಗೊಂಡಿದ್ದು, ಲಾರಿಯೊಳಗೆ ಸಿಲುಕಿ ಹಾಕಿಕೊಂಡಿದ್ದ ಬಸವರಾಜ್ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಈ ಬಗ್ಗೆ ಅಮಾಸೆಬೈಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story