ಬೆಳ್ಳಾರೆಯಲ್ಲಿ ಪೌರತ್ವ ತಿದ್ದುಪಡಿ ಮಸೂದೆ ವಿರುದ್ಧ ಎಸ್.ಡಿ.ಪಿ.ಐ ಪ್ರತಿಭಟನೆ
ಬೆಳ್ಳಾರೆ: ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಬೆಳ್ಳಾರೆ ವಲಯ ಸಮಿತಿ ಇದರ ವತಿಯಿಂದ ಶುಕ್ರವಾರ ಕೇಂದ್ರ ಸರಕಾರದ ವಿವಾದಾತ್ಮಕ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಜಾರಿಗೊಳಿಸಿರುವುದರ ವಿರುದ್ಧ ಪ್ರತಿಭಟನೆ ನಡೆಯಿತು.
ಪ್ರತಿಭಟನೆಯಲ್ಲಿ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಜಿಲ್ಲಾ ಸಮಿತಿಯ ಸವಾದ್ ಕಲ್ಲರ್ಪೆ ಎನ್.ಆರ್.ಸಿ ಪೌರತ್ವ ತಿದ್ದುಪಡಿಯ ಬಗ್ಗೆ ವಿಷಯ ಮಂಡಿಸಿ ಪೌರತ್ವ ತಿದ್ದುಪಡಿ ಮಸೂದೆ ಪ್ರತಿಯನ್ನು ಹರಿದು ಹಾಕುವ ಮೂಲಕ ಪ್ರತಿಭಟಿಸಿದರು.
ಎಸ್.ಡಿ.ಪಿ.ಐ ಸುಳ್ಯ ವಿಧಾನಸಭಾ ಸಮಿತಿ ಸದಸ್ಯರುಗಳಾದ ಮಮ್ಮಾಲಿ ಹಾಜಿ, ಬಿ.ಎ.ಬಶೀರ್, ವಲಯ ಉಪಾಧ್ಯಕ್ಷ ಆಶಿರ್.ಎ.ಬಿ, ಝೈನುದ್ದೀನ್ ಯು.ಎಚ್, ಕಾರ್ಯದರ್ಶಿ ಹಮೀದ್ ಮರಕ್ಕಡ, ಶಹೀದ್ ಬೆಳ್ಳಾರೆ, ಇಸ್ಮಾಯಿಲ್ ನೆಟ್ಟಾರು, ಆಶ್ರಫ್ ಎಂ,ಮುಂತಾದ ಹಲವಾರು ಪಕ್ಷದ ಕಾರ್ಯಕರ್ತರು, ನಾಗರಿಕರು ಭಾಗವಹಿಸಿದ್ದರು. ವಲಯ ಅಧ್ಯಕ್ಷ ಫೈಝಲ್ ಜಿ. ಸ್ವಾಗತಿಸಿ, ಬಶೀರ್ ವಂದಿಸಿದರು.
Next Story