ಮಂಜೇಶ್ವರ: ಪೌರತ್ವ ತಿದ್ದುಪಡಿ ಮಸೂದೆ ವಿರೋಧಿಸಿ ಪ್ರತಿಭಟನೆ
ಮಂಜೇಶ್ವರ: ಕೇಂದ್ರ ಸರಕಾರ ಜಾರಿಗೊಳಿಸಲು ಮುಂದಾಗಿರುವ ಪೌರತ್ವ ತಿದ್ದುಪಡಿ ಮಸೂದೆಯನ್ನು ವಿರೋಧಿಸಿ ಮಂಜೇಶ್ವರದ ವರ್ಕಾಡಿಯ ರಹ್ಮಾನಿಯಾ ಜುಮಾ ಮಸ್ಜಿದ್ ಕಜೆ ಪಾತೂರ್ ಜಮಾಅತ್ ಸಮಿತಿ ಮತ್ತು ಎಸ್ಕೆಎಸ್ಸೆಸೆಫ್ ಕಜೆ ಶಾಖೆ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನೆಯಲ್ಲಿ ಜಮಾಅತ್ ಸಮಿತಿಯ ಅಧ್ಯಕ್ಷರು ಮೋನು, ಕಾರ್ಯದರ್ಶಿ ಅಬ್ದುಲ್ ಖಾದರ್, ಜಮಾಅತ್ ಖತೀಬ್ ಮೊಹಮ್ಮದ್ ಫೈಝಿ ಕಜೆ ,ಮುಸ್ಲಿಂ ಯೂಥ್ ಲೀಗ್ ಪಂಚಾಯತ್ ಕಾರ್ಯದರ್ಶಿ ಝುಬೈರ್ ಮಾಸ್ಟರ್, ಯಾಕೂಬ್ ಬಾಖವಿ ಕಜೆ, ಸಮೀರ್ ಕಜೆ, ಹಾರಿಸ್ ಬದ್ರಿ ಕಜೆ, ಲತೀಫ್ ಕಜೆ ಪಾಲ್ಗೊಂಡಿದ್ದರು.
Next Story