ಸರಪಾಡಿ: ಡಿ. 15ರಂದು 'ಕೆಸರ್ ಕಂಡೊಡು ತುಳುವೆರೆ ಗೊಬ್ಬುಲು'
ಬಂಟ್ವಾಳ, ಡಿ. 13: ತಾಲೂಕಿನ ಸರಪಾಡಿ ಸಮೀಪದ ಬೀಯಪಾದೆ ಪೆರ್ಲ ಆಶೀರ್ವಾದ ಗೆಳೆಯರ ಬಳಗ ಮತ್ತು ತುಳು ಸಾಹಿತ್ಯ ಅಕಾಡಮಿ ವತಿಯಿಂದ ಡಿ. 15ರಂದು ಬೆಳಿಗ್ಗೆ 9.30ಗಂಟೆ ಗೆ 7ನೇ ವರ್ಷದ 'ಕೆಸರ್ ಕಂಡೊಡು ತುಳುವೆರೆ ಗೊಬ್ಬುಲು' ಕಾರ್ಯಕ್ರಮ ನಡೆಯಲಿದೆ ಎಂದು ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ತಿಲಕ್ ಶಾಂತಿ ಬಾಪುಕೋಡಿ ತಿಳಿಸಿದ್ದಾರೆ.
ಶುಕ್ರವಾರ ಸಂಜೆ ಬಿ.ಸಿ.ರೋಡಿನ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಇಲ್ಲಿನ ದೈವಜ್ಞ ದಿವಂಗತ ನಾರಾಯಣ ಶಾಂತಿ ಮತ್ತು ದಿವಂಗತ ಎನ್.ಸುಬ್ಬಣ್ಣ ಶೆಟ್ಟಿ ಸರಪಾಡಿ ಸ್ಮರಣಾರ್ಥ ಅಂದು ಬೆಳಿಗ್ಗೆ ನಡೆಯುವ ಕಾರ್ಯಕ್ರಮಕ್ಕೆ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಕೆ.ಸೇಸಪ್ಪ ಕೋಟ್ಯಾನ್ ಚಾಲನೆ ನೀಡುವರು. ಸಂಜೆ ನಡೆಯುವ ಸಮಾರೋಪ ಕಾರ್ಯಕ್ರಮದಲ್ಲಿ ಕರಿಂಜೆ ಕ್ಷೇತ್ರದ ಮುಕ್ತಾನಮದ ಸ್ವಾಮೀಜಿ ಆಶೀರ್ವಚನ ನೀಡುವರು. ಶಾಸಕ ರಾಜೇಶ ನಾಯ್ಕ್ ಉಳಿಪಾಡಿಗುತ್ತು, ಮಾಜಿ ಸಚಿವ ಬಿ.ರಮಾನಾಥ ರೈ, ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ದಯಾನಮದ ಜಿ.ಕತ್ತಲ್ಸಾರ್ ಮತ್ತಿತರ ಗನ್ಯರು ಭಾಗವಹಿಸುವರು ಎಂದು ಗಿರೀಶ ಕೋಟ್ಯಾನ್ ಎಕ್ಕುಡೇಲುಗುತ್ತು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಸಮಿತಿ ಗೌರವ ಸಲಹೆಗಾರ ಮಧ್ವರಾಜ್ ಬಿ.ಕಲ್ಮಾಡಿ, ಲೋಕೇಶ ಪೂಜಾರಿ, ಪ್ರಮುಖರಾದ ರಘುರಾಮ ಕೋಟ್ಯಾನ್, ಮೋಹನ ಪೂಜಾರಿ ಹಾಜರಿದ್ದರು.