ಜೆಪ್ಪು ಸಂತ ಆಂತೋನಿ ಆಶ್ರಮದಿಂದ ಕಾರ್ಪೊರೇಟರ್ಗಳಿಗೆ ಸನ್ಮಾನ
ಮಂಗಳೂರು, ಡಿ.15: ಜೆಪ್ಪು ಸಂತ ಅಂತೋನಿ ಆಶ್ರಮದ ವತಿಯಿಂದ ‘ಕ್ರಿಸ್ತ ನಮನ 2019’ ಕಾರ್ಯಕ್ರಮವು ಶುಕ್ರವಾರ ಜರುಗಿತು.
ಕಾರ್ಯಕ್ರಮದಲ್ಲಿ ಮಹಾನಗರ ಪಾಲಿಕೆಗೆ ನೂತನವಾಗಿ ಆಯ್ಕೆಯಾದ ಕಾರ್ಪೊರೇಟರ್ಗಳಾದ ಲ್ಯಾನ್ಸಿಲಾಟ್ ಪಿಂಟೊ, ಜೆಸಿಂತಾ ಆಲ್ಫ್ರೆಡ್, ನವೀನ್ ಡಿಸೋಜ, ಅಬ್ದುರ್ರವೂಫ್, ವಿನಯ್ರಾಜ್, ಭರತ್ ಕುಮಾರ್ ಎಸ್., ಶೈಲೇಶ್ ಬಿ. ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭ ಡಾ. ಶ್ರೀವರ್ಮ ಹೆಗ್ಗಡೆ, ಪ್ರೊ.ಅಬ್ದುಲ್ ನೂರಾನಿ, ಡಾ. ಜುಲಿಯಾನಾ ಸಲ್ದಾನ, ಕೃಷ್ಣರಾಜ್ ಕೆ., ಗೋಪಾಲ್ ಭಟ್, ಶಾಂತಲಾ ಗಟ್ಟಿ, ಮಂಜುಳಾ,ಫಾ. ಸಿಪ್ರಿಯನ್ ಪಿಂಟೊ, ಫಾ. ಫ್ರಾನ್ಸಿಸ್ ಡಿಸೋಜ, ಫಾ. ರೋಶನ್ ಡಿಸೋಜ, ಫಾ. ತೃಶಾನ್ ಡಿಸೋಜ ಮತ್ತಿತರರು ಉಪಸ್ಥಿತರಿದ್ದರು.
ಸಂಸ್ಥೆಯ ನಿರ್ದೇಶಕ ಫಾ.ಒನಿಲ್ ಡಿಸೋಜ ಸ್ವಾಗತಿಸಿದರು. ಸಂಸ್ಥೆಯ ಸಹಾಯಕ ನಿರ್ದೇಶಕ ಫಾ. ತೃಶಾನ್ ಡಿಸೋಜ ವಂದಿಸಿದರು. ಶೈನಿ ಡಿಸೋಜ ಕಾರ್ಯಕ್ರಮ ನಿರೂಪಿಸಿದರು.
Next Story