ಹಳೆಯಂಗಡಿ : ತಾಜುಲ್ ಉಲಮಾ ಅನುಸ್ಮರಣೆ, ಬುರ್ದಾ ಮಜ್ಲಿಸ್ ಕಾರ್ಯಕ್ರಮ
ಹಳೆಯಂಗಡಿ : ಇಲ್ಲಿನ ಬದ್ರಿಯಾ ಜುಮಾ ಮಸೀದಿ ಹಾಗೂ ಎಸ್ಸೆಸೆಫ್ ಸಾಗ್ ಶಾಖೆಯ ವತಿಯಿಂದ ತಾಜುಲ್ ಉಲಮಾ ಅನುಸ್ಮರಣೆ ಹಾಗೂ ಬುರ್ದಾ ಮಜ್ಲಿಸ್ ಕಾರ್ಯಕ್ರಮವು ಸಾಗ್ ಬದ್ರಿಯಾ ಜುಮಾ ಮಸೀದಿಯ ವಠಾರದಲ್ಲಿ ಮಂಗಳವಾರ ರಾತ್ರಿ ನಡೆಯಿತು.
ಬುರ್ದಾ ಮಜ್ಲಿಸ್ ನ ನೇತೃತ್ವವನ್ನು ತ್ವಾಹಾ ತಂಙಳ್ ವಹಿಸಿದ್ದು, ಬದ್ರಿಯಾ ಜುಮಾ ಮಸೀದಿಯ ಖತೀಬ್ ಇ.ಎಂ. ಅಬ್ದುಲ್ಲಾ ಮದನಿ ಮುಖ್ಯ ಭಾಷಣಗೈದರು. ಸಮಿತಿಯ ಅಧ್ಯಕ್ಷ ಅಬ್ದುರಹ್ಮಾನ್ ಕುಡುಂಬೂರು ಅಧ್ಯಕ್ಷ ವಹಿಸಿದ್ದರು. ಇಬ್ರಾಹಿಂ ಮದನಿ ತಾಜುಲ್ ಉಲಮಾ ಅವರ ಅನುಸ್ಮರಣೆಯ ಸಂದೇಶ ಭಾಷಣ ಮಾಡಿದರು. ತಾಜುಲ್ ಉಲಮಾ ಅವರ ಪುತ್ರ ಮೀರಾಜ್ ತಂಙಳ್ ದುವಾ ನೆರವೇರಿಸಿದರು.
ಸಮಾರಂಭದಲ್ಲಿ ಹಳೆಯಂಗಡಿ ಕೇಂದ್ರ ಜುಮಾ ಮಸೀದಿಯ ಅಧ್ಯಕ್ಷ ಶಾಹುಲ್ ಹಮೀದ್, ಅಬ್ದುಲ್ ರಝಾಕ್ ಮೂಡುತೋಟ ಸಾಗ್, ಹಮೀದ್ ಮುಸ್ಲಿಯಾರ್, ಅಬ್ದುಲ್ ರಹ್ಮಾನ್ ಮದನಿ, ಶುಕೂರ್ ಇರ್ಫಾನ್, ಶಹೀನ್ ಬಾಬು, ಫಾರೂಕ್ ಸಾಗ್, ಶಮೀಮ್ ಸಾಗ್, ಎಂ.ಎಚ್. ಮುಸ್ತಫಾ ಸಾಗ್, ಉಬೈದುಲ್ಲಾ ಸಾಗ್, ಅಬ್ದುಲ್ ಖಾದರ್, ಸ್ವಾಲೀಹ್ ಸಾಗ್, ಅಕ್ಬರ್ , ಶಮೀಮ್, ಎಂ.ಎಚ್. ಅಬ್ದುಲ್ ಸಲಾಮ್, ಅಬ್ದುಲ್ ಖಾದರ್ ಕಜಕತೋಟ, ಹನೀಫ್ ಸಾಗ್, ರಕೀನ್, ಸಾಅದ್, ಹಮೀದ್ , ಬಶೀರ್ ಹಾಗು ಇತರರು ಈ ಸಂದರ್ಭ ಉಪಸ್ಥಿತರಿದ್ದರು.