ಉಪ್ಪಿನಂಗಡಿಯಲ್ಲಿ ಪರಮ ಪ್ರಸಾದದ ಮೆರವಣಿಗೆ
ಉಪ್ಪಿನಂಗಡಿ: ಇಲ್ಲಿನ ದೀನರ ಕನ್ಯಾ ಮಾತೆ ದೇವಾಲಯದ ವತಿಯಿಂದ ಭಾನುವಾರ ಉಪ್ಪಿನಂಗಡಿ ಪೇಟೆಯಲ್ಲಿ ಪರಮ ಪ್ರಸಾದದ ಮೆರವಣಿಗೆ ನಡೆಸಲಾಯಿತು.
ದೀನರ ಕನ್ಯಾ ಮಾತೆ ದೇವಾಲಯದಿಂದ ಆರಂಭವಾದ ಮೆರವಣಿಗೆಯು ಉಪ್ಪಿನಂಗಡಿ ಪೇಟೆಯಲ್ಲಿ ಸುತ್ತು ಹೊಡೆದು ಮರಳಿ ದೀನರ ಕನ್ಯಾಮಾತೆ ದೇವಾಲಯಕ್ಕೆ ತೆರಳಿ ಸಮಾಪ್ತಿ ಕಂಡಿತು. ಮಂಗಳೂರಿನ ಧರ್ಮಗುರು ರೆ.ಫಾ. ಅ್ಯಂಟನಿ ಜಾರ್ಜ್ ಪಿಂಟೋ, ಉಪ್ಪಿನಂಗಡಿ ದೀನರ ಕನ್ಯಾಮಾತೆ ದೇವಾಲಯದ ಧರ್ಮಗುರು ರೆ. ಫಾ. ಅಬೆಲ್ ಲೊಬೋ ಪರಮ ಪ್ರಸಾದ ಮೆರವಣಿಗೆಯ ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸಿದರು.
ಮೆರವಣಿಗೆಯಲ್ಲಿ ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷ ನವೀನ್ ಬ್ರಾಗ್ಸ್, ಪ್ರಮುಖರಾದ ವಿನ್ಸೆಂಟ್ ಮೋರಾಸ್, ಹೆನ್ರಿ ಜಾನ್ ಲೊಬೋ, ಮಾರ್ಕ್ ಮಸ್ಕರೇನಸ್, ಗಿಲ್ಬರ್ಟ್ ಅ್ಯಂಟನಿ ಮಿನೇಜಸ್, ಮ್ಯಾಕ್ಸಿಂ ಲೋಬೋ , ಅರುಣ್ ಗೋಡ್ವಿನ್ ಮಿನೇಜಸ್, ಪ್ರಕಾಶ್ ಪಾಯಸ್, ಕೆನ್ಯೂಟ್ ಮಸ್ಕರೇನಸ್, ವಿನ್ಸೆಂಟ್ ವೇಗಸ್, ಈವ್ಲಿನ್ ಪಾಯಸ್, ಅನಿ ಮಿನೇಜಸ್, ಲವಿನಾ ಪಿಂಟೋ, ಗ್ರೇಸಿ ಡಿಸೋಜಾ, ವಿನ್ಸೆಂಟ್ ಫೆರ್ನಾಂಡೀಸ್, ಓಸ್ವಾಲ್ಡ್ ಪಿಂಟೋ, ಕ್ಲೋರಾ ಲಾಸ್ರಾದೋ ಮತ್ತಿತರರು ಭಾಗವಹಿಸಿದ್ದರು.