ಕರಾವಳಿ ಉತ್ಸವ ಪ್ರಯುಕ್ತ ಬ್ಯಾರಿ ಅಕಾಡೆಮಿ ಕಾರ್ಯಕ್ರಮ ಮುಂದೂಡಿಕೆ
ಮಂಗಳೂರು: ಮಂಗಳೂರಿನಲ್ಲಿ ನಡೆಯುತ್ತಿರುವ ಕರಾವಳಿ ಉತ್ಸವದ ಪ್ರಯುಕ್ತ ಜ. 15 ರಂದು ವಸ್ತುಪ್ರದರ್ಶನ ಮೈದಾನದ ಬಳಿ ನಡೆಯಲಿರುವ ಬ್ಯಾರಿ ಸಾಂಸ್ಮೃತಿಕ ಕಾರ್ಯಕ್ರಮ ವನ್ನು ಕಾರಣಾಂತರದಿಂದ ಮುಂದೂಡಲಾಗಿದೆ ಎಂದು ಬ್ಯಾರಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ರಹೀಂ ಉಚ್ಚಿಲ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜ.10 ರಂದು ಪ್ರಾರಂಭವಾದ ಕರಾವಳಿ ಉತ್ಸವದಲ್ಲಿ ಪ್ರತಿ ದಿನ ಸಂಜೆ ಜಿಲ್ಲೆಯಲ್ಲಿ ಕಾರ್ಯಾಚರಿಸುತ್ತಿರುವ ಎಲ್ಲಾ ಅಕಾಡೆಮಿಗಳು ಹಾಗೂ ಇನ್ನಿತರ ಸಾಂಸ್ಕೃತಿಕ ಸಂಸ್ಥೆಗಳು ಒಂದೊಂದು ದಿನ ಕಾರ್ಯಕ್ರಮ ನೀಡುವ ಬಗ್ಗೆ ಮೊದಲೇ ದಿನಾಂಕ ನಿರ್ದರಿಸಲಾಗಿತ್ತು ಹಾಗೂ ಪ್ರತಿ ವರ್ಷ ಈ ಪದ್ದತಿ ಚಾಲ್ತಿಯಲ್ಲಿತ್ತು. ಈ ಬಾರಿ ಕಾರಣಾಂತರದಿಂದ ಬ್ಯಾರಿ ಅಕಾಡೆಮಿಯ ಕಾರ್ಯಕ್ರಮ ಮುಂದೂಡಲಾಗಿದೆ ಎಂದು ಅಕಾಡೆಮಿಯ ಪ್ರಕಟಣೆಯು ತಿಳಿಸಿದೆ.
Next Story