ವಿಟ್ಲ: ಓಮ್ನಿ-ವೆಂಚರ್ ವಾಹನ ನಡುವೆ ಅಪಘಾತ; ಮಕ್ಕಳು ಸಹಿತ 7 ಮಂದಿಗೆ ಗಾಯ
ವಿಟ್ಲ : ಓಮ್ನಿ ಹಾಗೂ ವೆಂಚರ್ ವಾಹನಗಳ ನಡುವೆ ಭೀಕರ ಅಪಘಾತ ಸಂಭವಿಸಿ ಪುರುಷರು, ಮಹಿಳೆಯರು, ಮಕ್ಕಳು ಸಹಿತ ಏಳು ಮಂದಿ ಗಾಯಗೊಂಡ ಘಟನೆ ವಿಟ್ಲದ ಕೊಡಂಗಾಯಿ ಸಮೀಪದ ರಾಧುಕಟ್ಟೆ ಎಂಬಲ್ಲಿ ಸಂಭವಿಸಿದೆ.
ಅಪಘಾತದಿಂದ ಕುಂಡಡ್ಕ ಅಬ್ದುಲ್ಲಾ ಹಾಜಿ ಅವರ ಸ್ಥಿತಿ ಗಂಭಿರವಾಗಿದ್ದು, ಅವರ ಪುತ್ರ ಅಶ್ರಫ್, ಖತೀಜ, ಆಸಿಯಮ್ಮ, ಆರು ತಿಂಗಳ ಇಬ್ಬರು ಮಕ್ಕಳು ಹಾಗೂ ಐದು ವರ್ಷದ ಮಗು ಗಾಯಗೊಂಡಿದ್ದಾರೆ.
ಗಾಯಾಳುಗಳು ಮಂಗಳೂರು ದೇರಳಕಟ್ಟೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸಾಲೆತ್ತೂರು ಕಡೆಯಿಂದ ಓಮ್ನಿ ಮೂಲಕ ವಿಟ್ಲ ಕಡೆಗೆ ಒಂದೇ ಕುಟುಂಬದವರು ತೆರಳುತ್ತಿದ್ದ ವೇಳೆ ಎದುರಿನಿಂದ ಬಂದ ವೆಂಚರ್ ವಾಹನ ಢಿಕ್ಕಿ ಹೊಡೆದ ಪರಿಣಾಮ ಈ ಅಪಘಾತ ಸಂಭವಿಸಿರುವುದಾಗಿ ದೂರಲಾಗಿದೆ.
ಸ್ಥಳಕ್ಕೆ ವಿಟ್ಲ ಪೊಲೀಸರು ಭೇಟಿ ನೀಡಿದ್ದಾರೆ.