ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧದ ಪ್ರತಿಭಟನೆ ಯಶಸ್ಸು ಗೊಳಿಸಿ: ಜಿಲ್ಲಾ ಮುಸ್ಲಿಂ ಲೀಗ್
ಮಂಗಳೂರು : ಕೇಂದ್ರ ಸರಕಾರ ಜಾರಿಗೊಳಿಸಿದ ಪೌರತ್ವ ಕಾಯ್ದೆ ವಿರುದ್ಧ ಬುಧವಾರ ಅಡ್ಯಾರ್ ಕಣ್ಣೂರು ಶಾ ಗಾರ್ಡನ್ ನಲ್ಲಿ ನಡೆಯಲಿರುವ ಐತಿಹಾಸಿಕ ಪ್ರತಿಭಟನೆ ಯನ್ನು ಯಶಸ್ಸು ಗೊಳಿಸುವಂತೆ ಜಿಲ್ಲಾ ಮುಸ್ಲಿಂ ಲೀಗ್ ಕರೆ ನೀಡಿದೆ.
ಈ ಬಗ್ಗೆ ಪತ್ರಿಕಾ ಪ್ರಕಟಣೆ ಯನ್ನು ಹೊರಡಿಸಿದ ಜಿಲ್ಲಾ ಮುಸ್ಲಿಂ ಲೀಗ್ ಅಧ್ಯಕ್ಷ ತಬೂಕ್ ದಾರಿಮಿ ಅವರು ಕಾಯ್ದೆಯು ಸಂವಿಧಾನ ವಿರುದ್ಧ ಮತ್ತು ದೇಶದ ಪರಂಪರೆಗೆ ಮಾರಕ ಆಗಿರುವುದರಿಂದ ಕಾನೂನು ಬದ್ಧ ಪ್ರತಿಭಟನೆಯನ್ನು ಸಮಿತಿ ಬಲಿಸುವುದೆಂದರು. ಮಾಜಿ ಮುಖ್ಯ ಮಂತ್ರಿ ಕುಮಾರ ಸ್ವಾಮಿ ಯವರು ಬಿಡುಗಡೆ ಗೊಳಿಸಿದ ವೀಡಿಯೋವನ್ನು ಪರಿಶೀಲಿಸಿ ಸೂಕ್ತ ತನಿಖೆಗೆ ಒಳಪಡಿಸಬೇಕೆಂದು ಈ ಸಂದರ್ಭ ಮನವಿ ಮಾಡಿದರು.
Next Story