ಅಂದರ್ಬಾಹರ್: ಆರು ಮಂದಿ ಬಂಧನ
ಬ್ರಹ್ಮಾವರ, ಜ.16: ಪೆಜಮಂಗೂರು ಗ್ರಾಮದ ಗಾಂಧಿನಗರ ಎಂಬಲ್ಲಿ ಜ.16ರಂದು ಅಂದರ್ ಬಾಹರ್ ಜುಗಾರಿ ಆಡುತ್ತಿದ್ದ ಆರು ಮಂದಿಯನ್ನು ಬ್ರಹ್ಮಾವರ ಪೊಲೀಸರು ಬಂಧಿಸಿದ್ದಾರೆ.
ಕೊಕ್ಕರ್ಣೆಯ ಹರೀಶ್ ಪೂಜಾರಿ(36), ಗಾಂಧಿನಗರದ ಗಣೇಶ ಮೊಗ ವೀರ(32), ಚಗರಿಬೆಟ್ಟುವಿನ ನವೀನ್ ಮರಕಾಲ(36), ಹರ್ಣಾಬೆಟ್ಟುವಿನ ಸುಧೀರ್(31), ನೆಂಜೂರಬೆಟ್ಟುವಿನ ಶೇಷಗಿರಿ(30), ನಕ್ಕೂರಿನ ಅಶೋಕ ನಾಯ್ಕ(30) ಬಂಧಿತ ಆರೋಪಿಗಳು.
ಇವರಿಂದ 13,800ರೂ. ನಗದು, 30,500ರೂ. ಮೌಲ್ಯದ ಒಟ್ಟು 9 ಮೊಬೈಲ್ ಫೋನ್ಗಳು, 15,000ರೂ. ಮೌಲ್ಯದ 2 ಬೈಕ್ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story