ಚಾರ್ಮಾಡಿ ಹಸನಬ್ಬ, ಮಾಧವ್ ಉಳ್ಳಾಲ್ರಿಗೆ "ಸರಿದಂತರ ಪ್ರಶಸ್ತಿ"
ಬಂಟ್ವಾಳ, ಜ. 17: ಚಾರ್ಮಾಡಿ ಘಾಟಿಯಲ್ಲಿ ಏನೇ ಅವಘಡ ಆದರೂ ಏನೂ ಪ್ರತಿಫಲ ಅಪೇಕ್ಷೆ ಬಯಸದೇ ತತ್ ಕ್ಷಣ ಸಹಾಯಕ್ಕೆ ಬರುವ, ಎಷ್ಟೋ ಜೀವಗಳನ್ನು ಉಳಿಸಿದ ಸಮಾಜ ಸೇವಕ ಚಾರ್ಮಾಡಿ ಹಸನಬ್ಬ ಮತ್ತು ರಾಜ್ಯದಾದ್ಯಂತ 30 ಸಾವಿರಕ್ಕೂ ಹೆಚ್ಚು ಗಿಡಗಳನ್ನು ನೆಟ್ಟು ಪೋಷಿಸಿ ಪ್ರಕೃತಿ ಸಂರಕ್ಷಣೆಯಲ್ಲಿ ತೊಡಗಿಸಿ ಕೊಂಡಿರುವ ಪರಿಸರ ಸೇವಕ ಮಾಧವ್ ಉಳ್ಳಾಲ್ ಅವರಿಗೆ 2020ರ ಸರಿದಂತರ ಪ್ರಶಸ್ತಿ ನೀಡಿ ಗೌರವಿಸಲಾಗುವುದು.
ಜ. 19ರಂದು ಬಂಟ್ವಾಳದ ಮೊಡಂಕಾಪುವಿನಲ್ಲಿರುವ ಈ ಪ್ರಶಸ್ತಿ ಪುರಸ್ಕಾರ ನೀಡಿ ಗೌರವಿಸಲಾಗುವುದು ಎಂದು ಸರಿದಂತರ ಪ್ರಕಾಶನದ ಸಂಚಾಲಕ ಪ್ರೊ. ರಾಜಮಣಿ ರಾಮಕುಂಜ ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Next Story