ಕುಳಾಯಿ: ದೈವದ ಕೋಣೆ ಬಾಗಿಲ ಬೀಗ ಮುರಿದು ಲಕ್ಷಾಂತರ ರೂ. ಮೌಲ್ಯದ ಆಭರಣ ಕಳವು
ಸುರತ್ಕಲ್, ಜ.17: ಸುರತ್ಕಲ್ ಕುಳಾಯಿ ನಂದನಜಲು ಬಳಿಯ ನಿವಾಸಿ ರವಿ ಎಸ್. ಶೆಟ್ಟಿ ಅವರ ಮನೆಗೆ ತಾಗಿಕೊಂಡಿರುವ ದೈವಸ್ಥಾನದ ಬಾಗಿಲ ಬೀಗ ಮುರಿದು ಲಕ್ಷಾಂತರ ರೂ. ಮೌಲ್ಯದ ಬೆಳ್ಳಿಯ ಆಭರಣಗಳನ್ನು ಕಳವು ಮಾಡಿರುವ ಘಟನೆ ಶುಕ್ರವಾರ ನಡೆದಿದೆ.
ಕಳವಾದ ವಸ್ತುಗಳು ಸುಮಾರು 4 ಲಕ್ಷ 60 ಸಾವಿರ ರೂ. ಮೌಲ್ಯವಾದದ್ದು ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಸುರತ್ಕಲ್ ಪೋಲೀಸರು ಪ್ರಕರಣ ದಾಖಲಾಗಿದ್ದು ತನಿಖೆ ನಡೆಸುತ್ತಿದ್ದಾರೆ
Next Story