ಕರಾವಳಿ ಗೌರವ ಪ್ರಶಸ್ತಿ: ಮನೋಹರ್ ಪ್ರಸಾದ್ ರಿಗೆ ಆಹ್ವಾನ
ಮಂಗಳೂರು, ಜ.18: ದ.ಕ. ಜಿಲ್ಲಾಡಳಿತ ನೀಡುವ ಕರಾವಳಿ ಗೌರವ ಪ್ರಶಸ್ತಿಗೆ ಆಯ್ಕೆಯಾದ ಹಿರಿಯ ಪತ್ರಕರ್ತ ಮನೋಹರ್ ಪ್ರಸಾದ್ ಅವರಿಗೆ ಪ್ರಶಸ್ತಿ ಆಯ್ಕೆ ಪತ್ರ ಹಾಗೂ ಆಹ್ವಾನವನ್ನು ಇಂದು ಸಾಂಪ್ರದಾಯಿಕವಾಗಿ ತಾಂಬೂಲದೊಂದಿಗೆ ನೀಡಲಾಯಿತು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರಾಜೇಶ್, ಜಿಲ್ಲಾ ವಾರ್ತಾಧಿಕಾರಿ ಬಿ.ಎ.ಖಾದರ್ ಶಾ, ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ ಉಪಸ್ಥಿತರಿದ್ದರು.
Next Story