ಕುದ್ರೋಳಿ: ‘ಜಸ್ಟೀಸ್ ಫಾರ್ ರೋಹಿತ್ ವೇಮುಲಾ’ ಪ್ರತಿಭಟನೆ
ಮಂಗಳೂರು, ಜ.18: ಎಸ್ಐಒ ಕುದ್ರೋಳಿ ಶಾಖೆಯ ವತಿಯಿಂದ ಜಸ್ಟೀಸ್ ಫಾರ್ ರೋಹಿತ್ ವೇಮುಲಾ ಪ್ರತಿಭಟನೆಯು ನಡೆಯಿತು.
ಈ ಸಂದರ್ಭ ಮಾತನಾಡಿದ ಎಎಮ್ಯು ಕೇರಳ ವಿದ್ಯಾರ್ಥಿ ನಿಹಾಲ್, ವಿದ್ಯಾರ್ಥಿಗಳು ಸರಕಾರದ ದಮನ ನೀತಿಗಳನ್ನು ಮುನ್ನಡೆಸುವ ಮೂಲಕ ವಿರೋಧಪಕ್ಷವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿದ್ಯಾರ್ಥಿಗಳ ಪ್ರತಿರೋಧವನ್ನು ಸರಕಾರಕ್ಕೆ ದೊಡ್ಡ ಕಂಠಕವಾಗಿ ಮಾರ್ಪಟ್ಟಿದೆ. ಈ ಹಿನ್ನೆಲೆಯಲ್ಲಿ ಸರಕಾರ ವಿದ್ಯಾರ್ಥಿಗಳ ಧ್ವನಿಯನ್ನು ಅಡಗಿಸಲು ಯತ್ನಿಸುತ್ತಿದೆ, ಆದರೆ ವಿದ್ಯಾರ್ಥಿಗಳು ಈ ದೇಶದ ಆಶಾಕಿರಣವಾಗಿ ತಮ್ಮ ಪ್ರತಿರೋಧವನ್ನು ತೋರಿಸುತ್ತಿದ್ದಾರೆ ಎಂದರು.
ಈ ಸಂದರ್ಭ ಎಸ್ಐಒ ಕುದ್ರೋಳಿ ಶಾಖೆಯ ಅಧ್ಯಕ್ಷ ಸಲ್ಮಾನ್ ಕುದ್ರೋಳಿ, ಸದಸ್ಯರಾದ ಮುಂಝಿರ್ ಅಹ್ಸನ್, ಇಜಾಝ್ ಕುದ್ರೋಳಿ, ರುಮಾನ್ ಮತ್ತಿತರರು ಉಪಸ್ಥಿತರಿದ್ದರು.
Next Story